ಬಂಧಿತ ಪ್ರದೀಪ್ 
ರಾಜ್ಯ

ಎಸ್ ಐ ಎಂದು ಹೇಳಿಕೊಂಡು ಪಿಜಿ ಮಾಲೀಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದನ ಬಂಧನ

ಪೊಲೀಸ್ ಸಮವಸ್ತ್ರ ಧರಿಸಿ ಪೈಯಿಂಗ್ ಗೆಸ್ಟ್ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಸಬ್ ಇನ್ಸ್​ಪೆಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ...

ಬೆಂಗಳೂರು: ಪೊಲೀಸ್  ಸಮವಸ್ತ್ರ ಧರಿಸಿ ಪೈಯಿಂಗ್ ಗೆಸ್ಟ್ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಸಬ್ ಇನ್ಸ್​ಪೆಕ್ಟರ್  ಪೊಲೀಸರ ಅತಿಥಿಯಾಗಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ಪ್ರದೀಪ್ (25) ಬಂಧಿತ ಯುವಕ. ಎಸ್ಸೈ ಆಗುವ ಕನಸು ಕಂಡಿದ್ದ ಪ್ರದೀಪ್ ಕಳೆದ ವರ್ಷ ಎಸ್ಸೈ ನೇಮಕಾತಿಗೆ ಪರೀಕ್ಷೆ ಬರೆದಿದ್ದನಾದರೂ ಆಯ್ಕೆಯಾಗಿ ಇರಲಿಲ್ಲ. ಆದರೆ, ತನ್ನ ಪಾಲಕರು, ಊರಿನ ಜನರು ಮತ್ತು ಸ್ನೇಹಿತರಿಗೆ ತಾನು ಎಸ್ಸೈ ಹುದ್ದೆಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ.

ತರಬೇತಿಗೆ ಹೋಗುತ್ತಿರುವುದಾಗಿ ಪಾಲಕರಿಗೆ ಹೇಳಿ ನಗರಕ್ಕೆ ಬಂದು ಕೆ.ಆರ್. ಪುರ ಸಮೀಪದ ಭಟ್ಟರಹಳ್ಳಿ ಯಲ್ಲಿರುವ ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದನು.

ಸಬ್ ಇನ್ಸ್​ಪೆಕ್ಟರ್ ಎಂದು ಹೇಳಿಕೊಂಡೇ ಕೋಲಾರದಲ್ಲಿ ಸಮವಸ್ತ್ರ ಹೊಲಿಸಿಕೊಂಡಿದ್ದ. ಪಿಜಿ ಮಾಲೀಕ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೂ ಎಸ್ಸೈ ಎಂದೇ ಪರಿಚಯಿಸಿಕೊಂಡಿದ್ದ. ಎಸ್ಸೈ ಸಮವಸ್ತ್ರ ಧರಿಸಿ ಓಡಾಡುತ್ತಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.

ಪೊಲೀಸ್ ಡ್ರೆಸ್ ಧರಿಸಿ ಬೆಳಗ್ಗೆ ಹೊರಡುತ್ತಿದ್ದ ಪ್ರದೀಪ್, ಪಿಜಿ ಮಾಲೀಕರು, ಅಂಗಡಿಗಳು, ಫುಟ್​ಪಾತ್ ವ್ಯಾಪಾರಿಗಳನ್ನು ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಭಟ್ಟರಹಳ್ಳಿ ಸುತ್ತಮುತ್ತಲ ಜನರಿಗೆ ತಾನು ಹಲಸೂರು ಠಾಣೆ ಎಸ್ಸೈ ಎಂದು ಹೇಳುತ್ತಿದ್ದ. ಬೇರೆ ಪ್ರದೇಶಕ್ಕೆ ಹೋದಾಗ ಕೆ.ಆರ್. ಪುರ ಠಾಣೆ ಎಸ್ಸೈ ಎಂದು ಪರಿಚಯಿಸಿಕೊಳ್ಳುತ್ತಿದ್ದ.

ಪಿಜಿ ಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತದ್ದೀರಾ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಬುಧವಾರ ಭಟ್ಟರ ಹಳ್ಳಿಯ ಪಿಜಿಗೆ ಬಂದು ಮಾಲೀಕರನ್ನು ಬೆದರಿಸುತ್ತಿದ್ದ ವೇಳೆ ಎಚಚ್ಚರಗೊಂಡ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ, ಸುಲಭವಾಗಿ ಹಣ ಸಂಪಾದಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಬಂಧಿತ ಪ್ರದೀಪ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT