ಬಂಧಿತ ಪ್ರದೀಪ್ 
ರಾಜ್ಯ

ಎಸ್ ಐ ಎಂದು ಹೇಳಿಕೊಂಡು ಪಿಜಿ ಮಾಲೀಕರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದನ ಬಂಧನ

ಪೊಲೀಸ್ ಸಮವಸ್ತ್ರ ಧರಿಸಿ ಪೈಯಿಂಗ್ ಗೆಸ್ಟ್ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಸಬ್ ಇನ್ಸ್​ಪೆಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ...

ಬೆಂಗಳೂರು: ಪೊಲೀಸ್  ಸಮವಸ್ತ್ರ ಧರಿಸಿ ಪೈಯಿಂಗ್ ಗೆಸ್ಟ್ ಮಾಲೀಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಸಬ್ ಇನ್ಸ್​ಪೆಕ್ಟರ್  ಪೊಲೀಸರ ಅತಿಥಿಯಾಗಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ಪ್ರದೀಪ್ (25) ಬಂಧಿತ ಯುವಕ. ಎಸ್ಸೈ ಆಗುವ ಕನಸು ಕಂಡಿದ್ದ ಪ್ರದೀಪ್ ಕಳೆದ ವರ್ಷ ಎಸ್ಸೈ ನೇಮಕಾತಿಗೆ ಪರೀಕ್ಷೆ ಬರೆದಿದ್ದನಾದರೂ ಆಯ್ಕೆಯಾಗಿ ಇರಲಿಲ್ಲ. ಆದರೆ, ತನ್ನ ಪಾಲಕರು, ಊರಿನ ಜನರು ಮತ್ತು ಸ್ನೇಹಿತರಿಗೆ ತಾನು ಎಸ್ಸೈ ಹುದ್ದೆಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ.

ತರಬೇತಿಗೆ ಹೋಗುತ್ತಿರುವುದಾಗಿ ಪಾಲಕರಿಗೆ ಹೇಳಿ ನಗರಕ್ಕೆ ಬಂದು ಕೆ.ಆರ್. ಪುರ ಸಮೀಪದ ಭಟ್ಟರಹಳ್ಳಿ ಯಲ್ಲಿರುವ ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದನು.

ಸಬ್ ಇನ್ಸ್​ಪೆಕ್ಟರ್ ಎಂದು ಹೇಳಿಕೊಂಡೇ ಕೋಲಾರದಲ್ಲಿ ಸಮವಸ್ತ್ರ ಹೊಲಿಸಿಕೊಂಡಿದ್ದ. ಪಿಜಿ ಮಾಲೀಕ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೂ ಎಸ್ಸೈ ಎಂದೇ ಪರಿಚಯಿಸಿಕೊಂಡಿದ್ದ. ಎಸ್ಸೈ ಸಮವಸ್ತ್ರ ಧರಿಸಿ ಓಡಾಡುತ್ತಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.

ಪೊಲೀಸ್ ಡ್ರೆಸ್ ಧರಿಸಿ ಬೆಳಗ್ಗೆ ಹೊರಡುತ್ತಿದ್ದ ಪ್ರದೀಪ್, ಪಿಜಿ ಮಾಲೀಕರು, ಅಂಗಡಿಗಳು, ಫುಟ್​ಪಾತ್ ವ್ಯಾಪಾರಿಗಳನ್ನು ಹೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಭಟ್ಟರಹಳ್ಳಿ ಸುತ್ತಮುತ್ತಲ ಜನರಿಗೆ ತಾನು ಹಲಸೂರು ಠಾಣೆ ಎಸ್ಸೈ ಎಂದು ಹೇಳುತ್ತಿದ್ದ. ಬೇರೆ ಪ್ರದೇಶಕ್ಕೆ ಹೋದಾಗ ಕೆ.ಆರ್. ಪುರ ಠಾಣೆ ಎಸ್ಸೈ ಎಂದು ಪರಿಚಯಿಸಿಕೊಳ್ಳುತ್ತಿದ್ದ.

ಪಿಜಿ ಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತದ್ದೀರಾ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಬುಧವಾರ ಭಟ್ಟರ ಹಳ್ಳಿಯ ಪಿಜಿಗೆ ಬಂದು ಮಾಲೀಕರನ್ನು ಬೆದರಿಸುತ್ತಿದ್ದ ವೇಳೆ ಎಚಚ್ಚರಗೊಂಡ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ, ಸುಲಭವಾಗಿ ಹಣ ಸಂಪಾದಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಬಂಧಿತ ಪ್ರದೀಪ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT