ರಾಜ್ಯ

ಎತ್ತಿನಹೊಳೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್

Mainashree
ಮಂಗಳೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಬಂದ್ ಆಚರಿಸಲಾಯಿತು. 
ಮಂಗಳೂರು, ಪುತ್ತೂರು, ಸುಳ್ಯಾ, ಬಂಟ್ವಾಳ, ವಿಟ್ಲಾ, ಬೆಲ್ತಂಗಡಿ ಮತ್ತು ಮೂಡಬಿದಿರೆ ಟೌನ್ ಮತ್ತು ಸ್ಥಳಿಯ ಹಳ್ಳಿಗಳಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು. 
ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಖಾಸಗಿ ವಾಹನ, ಸರ್ಕಾರಿ ಬಸ್ ಗಳು ರಸ್ತೆಗೆ ಇಲಿಯಲಿಲ್ಲ. ಅಂಗಡಿ ಮುಂಗಟ್ಟು, ಹೋಟೆಲ್ ಗಳು ಮುಚ್ಚಿದ್ದವು. ಕೆಎಸ್ ಆರ್ ಟಿಸಿ, ಆಟೋ ಚಾಲಕರು ಬಂದ್ ಗೆ ಬೆಂಬಲಿಸಿದ್ದಾರೆ. ಇನ್ನು ಬಂದ್ ಗೆ ಎಲ್ಲಾ ರಾಜಕೀಯ ಪಕ್ಷಗಳು, ವಿವಧ ಸಂಘಟನೆಗಳು, ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದವು.
SCROLL FOR NEXT