ಕರ್ನಾಟಕ ಸರ್ಕಾರದ ಲೋಗೋ 
ರಾಜ್ಯ

ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಸ್ವಚ್ಛತಾ ಅಭಿಯಾನ

ಮುಂದಿನ ಎರಡು ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಪೂರ್ಣವಾಗಿ ಸ್ವಚ್ಛಗೊಳ್ಳಲಿದೆ. ಕೆಲಸಕ್ಕೆ ಬಾರದ ಹಳೇಯ ಸಾಮಾಗ್ರಿಗಳನ್ನೆಲ್ಲಾ ಹರಾಜು ಹಾಕುವುದಾಗಿ ...

ಬೆಂಗಳೂರು:  ಮುಂದಿನ ಎರಡು ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಪೂರ್ಣವಾಗಿ ಸ್ವಚ್ಛಗೊಳ್ಳಲಿದೆ. ಕೆಲಸಕ್ಕೆ ಬಾರದ ಹಳೇಯ ಸಾಮಾಗ್ರಿಗಳನ್ನೆಲ್ಲಾ ಹರಾಜು ಹಾಕುವುದಾಗಿ ಕಟ್ಟಡ ನಿರ್ವಹಣೆ ಕಾರ್ಯಕಾರಿ ಅಭಿಯಂತರ ನಟರಾಜ್ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಬಿದ್ದಿರುವ ಹಳೇಯ ಹಾಗೂ ಮುರಿದ ಪಿಠೋಪಕರಣಗಳನ್ನು ಖಾಲಿ ಮಾಡಿ ಮುಂದಿನ ಎರಡು ದಿನಗಳಲ್ಲಿ ಕಟ್ಟಡವನ್ನು ಸ್ವಚ್ಛಗೊಳಿಸಲಾಗುವುದು.

ಹರಾಜು ಪ್ರಕ್ರಿಯೆಗೆ ಸಮಯ ಹಿಡಿಯಲಿರುವುದರಿಂದ ಖಾಲಿ ಇರುವ ಯಾವುದಾದರೂ ಕೊಠಡಿಗೆ ತುಂಬುವುದಾಗಿ ಅವರು ಹೇಳಿದ್ದಾರೆ.

ರಾಜ್ಯದಲ್ಲಿರುವ ಹಲವು ಸರ್ಕಾರಿ ಕಚೇರಿಗಳು ಸ್ವಚ್ಚತೆಯಿಲ್ಲದೇ ಗಬ್ಬೆದ್ದು ನಾರುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ವರದಿ ನಂತರ ಎಚ್ಚೆತ್ತುಕೊಂಡಿರುವ ಲೋಕೋಪಯೋಗಿ ಇಲಾಖೆ ಹಿರಿಯ  ಅಧಿಕಾರಿಗಳು ಕಟ್ಟಡದ ಆವರಣದಲ್ಲಿ ಸುತ್ತಾಡಿ ಸ್ಚಚ್ಛತೆ ಇಲ್ಲದಿರುವುದನ್ನು ಗಮಿನಿಸಿ ಅನವಶ್ಯಕ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.

ವರ್ಕಿಂಗ್ ಡೇ ಆಗಿರುವುದರಿಂದ ಸಂಜೆ ಆರು ಗಂಟೆ ನಂತರ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಿಲಾಗುತ್ತದೆ. ಜೆಸಿ ಮತ್ತು ಲಾರಿಗಳ ಸಹಾಯದಿಂದ ಅನುಪಯುಕ್ತ ವಸ್ಚುಗಳನ್ನು ಕೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಶೀಘ್ರವೇ ಲೋಕೋಪಯೋಗಿ ಇಲಾಖೆಗೆ ಭೇಟಿ ನೀಡುವುದಾಗಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT