ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರು: ಪೆಟ್ರೋಲ್ ಬಂಕ್ ನಲ್ಲಿ ಇಂಧನ ಮಿಶ್ರಣ; ನೂರಾರು ವಾಹನಗಳಲ್ಲಿ ದೋಷ

ಇಲ್ಲಿನ ಟಿ.ನರಸೀಪುರ ರಸ್ತೆಯಲ್ಲಿರುವ ಮೇಗಲಾಪುರ ಗ್ರಾಮದಲ್ಲಿರುವ ಪೆಟ್ರೋಲ್ ಸ್ಟೇಷನ್ ನಲ್ಲಿ...

ಮೈಸೂರು: ಇಲ್ಲಿನ ಟಿ.ನರಸೀಪುರ ರಸ್ತೆಯಲ್ಲಿರುವ ಮೇಗಲಾಪುರ ಗ್ರಾಮದಲ್ಲಿರುವ ಪೆಟ್ರೋಲ್ ಸ್ಟೇಷನ್ ನಲ್ಲಿ ವಾಹನಕ್ಕೆ ಇಂಧನವನ್ನು ಪೂರೈಸಿಕೊಂಡ ನಂತರ ಅನೇಕ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳಲ್ಲಿ ತಾಂತ್ರಿಕ ದೋಷ ಅನುಭವಿಸಿದರು. ಕೆಲವರ ವಾಹನ ಕೆಟ್ಟು ಹೋಯಿತು. ಡೀಸೆಲ್ ಮತ್ತು ಪೆಟ್ರೋಲ್ ಮಿಶ್ರಣ ಮಾಡಿದ್ದು ಕಾರಣ ಎಂದು ಹೇಳಲಾಯಿತು.
ದ್ವಿಚಕ್ರ ವಾಹನ ಸವಾರರು ಹೇಳುವ ಪ್ರಕಾರ, ಮೊನ್ನೆ ಸೋಮವಾರ ರಾತ್ರಿ ಇಂಧನ ತುಂಬಿಸಿಕೊಂಡು ಕೆಲವು ಕಿಲೋ ಮೀಟರ್ ವರೆಗೆ ಹೋದ ನಂತರ ಬಿಳಿ ಹೊಗೆ ಬರಲಾರಂಭಿಸಿತು. ನಂತರ ಸ್ವಲ್ಪ ದೂರ ಹೋದ ಮುಂದೆ ಗಾಡಿ ತನ್ನಷ್ಟಕ್ಕೆ ನಿಂತಿತು. ಪೆಟ್ರೋಲ್, ಡೀಸೆಲ್ ಮಿಶ್ರಣ ಮಾಡಿದ್ದರಿಂದ ಹೀಗಾಗಿದೆ ಎಂದು 100ಕ್ಕೂ ಹೆಚ್ಚು ಬೈಕ್ ಸವಾರರು ಪೆಟ್ರೋಲ್ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದರು.
ತಮ್ಮ ಗಾಡಿ ರಿಪೇರಿ ಮಾಡಿಕೊಡಬೇಕೆಂದು ಅನೇಕ ವಾಹನ ಸವಾರರು ನಿನ್ನೆ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಮೈಸೂರು-ಟಿ.ನರಸೀಪುರ ರಸ್ತೆಯನ್ನು ಕೆಲ ಹೊತ್ತು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಆ ಬಳಿಕ ತಿಳಿದು ಬಂದದ್ದೇನೆಂದರೆ, ಭೂಮಿಯೊಳಗಿನ ಟ್ಯಾಂಕ್ ಹಾಳಾಗಿದ್ದು ಮೊನ್ನೆ ಸೋಮವಾರ ರಾತ್ರಿ ಇಂಧನವನ್ನು ತುಂಬಿಸುವಾಗ ಪೆಟ್ರೋಲ್ ಮತ್ತು ಡೀಸೆಲ್ ಮಿಶ್ರಣವಾಗಿ ದ್ವಿಚಕ್ರ ವಾಹನ ಸವಾರರ ವಾಹನಗಳಿಗೆ ತೊಂದರೆಯುಂಟಾಗಿದೆ.
ಪೆಟ್ರೋಲ್ ಬಂಕ್ ನ ಮಾಲಿಕರು ಎಲ್ಲಾ ವಾಹನಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೆಟ್ರೋಲಿಯಂ ಅಧಿಕಾರಿಗಳು ಇಂಧನ ಟ್ಯಾಂಕ್ ಗಳ ತಪಾಸಣೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT