ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಣವಿಲ್ಲದೇ, ಕೆಲಸವಿಲ್ಲದೇ, ದಿನಗೂಲಿ ನೌಕರರ ಪರದಾಟ

ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ ನೋಟು ನಿಷೇಧಗೊಳಿಸಿದ ಹಿನ್ನೆಲೆಯಲ್ಲಿ ಹಣವಿಲ್ಲದೇ ಬೆಂಗಳೂರು ನಗರದಲ್ಲಿರುವ ದಿನಗೂಲಿ ..

ಬೆಂಗಳೂರು:  ಕೇಂದ್ರ ಸರ್ಕಾರ 500 ಹಾಗೂ ಒಂದು ಸಾವಿರ ರೂ ನೋಟು ನಿಷೇಧಗೊಳಿಸಿದ ಹಿನ್ನೆಲೆಯಲ್ಲಿ  ಹಣವಿಲ್ಲದೇ ಬೆಂಗಳೂರು ನಗರದಲ್ಲಿರುವ ದಿನಗೂಲಿ ನೌಕರರು ಪರದಾಡುವಂತಾಗಿದೆ.

ಸರಿಯಾದ ಕೆಲಸವಿಲ್ಲದೇ ಜೊತೆಗೆ ಮಾಡಿದ ಕೆಲಸಕ್ಕೆ ಇನ್ನೂ ಹಣ ಸಿಗದೇ ಸಮಸ್ಯೆಗೆ ಸಿಲುಕಿದ್ದಾರೆ. ಎಲೆಕ್ಟ್ರಿಷಿಯನ್, ಪ್ಲಂಬರ್ಸ್, ಕಟ್ಟಡ ನಿರ್ಮಾಣ ಕೆಲಸಗಾರರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಇಲ್ಲಿ ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲದೇ, ಸರ್ಕಾರಿ ಗುರುತಿನ ಚೀಟಿಯಿಲ್ಲದೇ ಇರುವ ಹಣವನ್ನು ಬದಲಾಯಿಸಿಕೊಳ್ಳಲು ಆಗದೇ ಕೂಲಿ ಕಾರ್ಮಿರು ಪರದಾಡುವಂತಾಗಿದೆ.

ಪ್ರತಿ ವಾರ ಕೆಲಸಗಾರರಿಗೆ ಸುಮಾರು 50 ಸಾವಿರ ರೂ ಕೂಲಿ ನೀಡಬೇಕಾಗುತ್ತದೆ. ಆದರೆ ಸರ್ಕಾರ ವಾರಕ್ಕೆ ಕೇವಲ 10 ಸಾವಿರ ರೂ ಮಾತ್ರ ಡ್ರಾ ಮಾಡಲು ಅನುಮತಿ ನೀಡಿದೆ. ಹಣ ನೀಡದಿದ್ದರೇ ಕೆಲಸಗಾರರು ಕೆಲಸ ಮಾಡಲು ಬರುವುದಿಲ್ಲ ಎಂದು ಎಟಿಎಂ ನಲ್ಲಿ  ಹಣ ಪಡೆಯಲು ಕ್ಯೂ ನಲ್ಲಿ ನಿಂತಿದ್ದ, ವಿದ್ಯಾರಣ್ಯಪುರದ ಖಾಸಗಿ ಗುತ್ತಿಗೆದಾರ ಶಿವರಾಜ್ ಎಂಬುವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ನಮ್ಮ ಬಳಿ ಬ್ಯಾಂಕ್ ಖಾತೆ ಇಲ್ಲ. ಕೇವಲ 400 ರೂ ಮಾತ್ರ ಹಣವಿದೆ, ನಾನು ಬಾಗಲಕೋಟೆಯಿಂದ ಬಂದಿದ್ದು,  ಅಲ್ಲಿ 400 ರುಪಾಯಿ ಇದ್ದರೇ ಒಂದು ವಾರ ಜೀವನ ನಡೆಸಬಹುದು ಆದರೇ ಇಲ್ಲಾ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕಾರ್ಮಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT