ರಾಜ್ಯ

ಬೆಂಗಳೂರು: ಬೈಕ್ ಸವಾರನ ಮೇಲೆ ಹರಿದ ತಮಿಳುನಾಡು ಸರ್ಕಾರಿ ಬಸ್

Vishwanath S
ಬೆಂಗಳೂರು: ತಮಿಳುನಾಡು ಸರ್ಕಾರಿ ಬಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
25 ವರ್ಷದ ಪುಟ್ಟರಾಜು ಮೃತ ದುರ್ದೈವಿ. ಬೆಂಗಳೂರಿನ ಚಿಕ್ಕತೋಗೂರು ಗೇಟ್ ಬಳಿ ಪುಟ್ಟರಾಜು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಆಯಾ ತಪ್ಪಿ ಕೆಳಗೆ ಬಿದ್ದ ಪುಟ್ಟರಾಜು ಮೇಲೆ ಬಸ್ ಹರಿದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಲಿಬಿಲಿಗೊಂಡ ಬಸ್ ಚಾಲಕ ಬಸ್ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಬೈಕ್ ಸವಾರ ಬಸ್ ಅನ್ನು ಮಡಿವಾಳದವರೆಗೂ ಹಿಂಬಾಲಿಸಿ ಬಸ್ ಸಮೇತ ಚಾಲಕನನ್ನು ಹಿಡಿದಿದ್ದಾನೆ. 
ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
SCROLL FOR NEXT