ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಚಿಲ್ಲರೆ ವಿತರಿಸುತ್ತಿರುವ ಗಾಳಿಪಟ ಹಾರಾಟ ತಂಡ 
ರಾಜ್ಯ

ರೋಗಿಗಳಿಗೆ ಚಿಲ್ಲರೆ ಹಣ ನೀಡಿ ಸಹಾಯ ಮಾಡಿದ ಗಾಳಿಪಟ ಹಾರಾಟಗಾರರು

ಅಗತ್ಯ ವಸ್ತುಗಳ ಖರೀದಿಗೆ ತೊಂದರೆ ಆಗಬಾರದೆಂದು ಗಾಳಿಪಟ ಹಾರಾಟಗಾರರ ತಂಡವೊಂದು ರೋಗಿಗಳಿಗೆ ಚಿಲ್ಲರೆ ಹಣ ವಿತರಿಸಿ ನೆರವು ನೀಡಿದ್ದಾರೆ. ...

ಬೆಂಗಳೂರು:  ಅಗತ್ಯ ವಸ್ತುಗಳ ಖರೀದಿಗೆ ತೊಂದರೆ ಆಗಬಾರದೆಂದು ಗಾಳಿಪಟ ಹಾರಾಟಗಾರರ ತಂಡವೊಂದು ರೋಗಿಗಳಿಗೆ  ಚಿಲ್ಲರೆ ಹಣ ವಿತರಿಸಿ ನೆರವು ನೀಡಿದ್ದಾರೆ. ಹಿರಿಯ ಗಾಳಿಪಟ ಹಾರಾಟಗಾರ ವಿ. ಕೃಷ್ಣೋಜಿರಾವ್‌ ಮತ್ತು ಸ್ನೇಹಿತರು ನಗರದ ಬೌರಿಂಗ್‌ ಆಸ್ಪತ್ರೆ 500 ಮತ್ತು 1000 ರು.ಗೆ ಚಿಲ್ಲರೆ ವಿತರಿಸಿದ್ದಾರೆ.

ಭಾನುವಾರ ಬ್ಯಾಂಕ್ ಗಳಿಗೆ ರಜೆ ಇತ್ತು, ಜೊತೆಗೆ ಎಟಿಎಂ ಗಳ ಮುಂದೆ ಕ್ಯೂ ನಿಂತು ಅಗತ್ಯ ಸಾಮಾನು ಖರೀದಸಲಾಗದ ಜನಗಳಿಗೆ ರೋಗಿಗಳಿಗೆ ಚಿಲ್ಲರೆ ಸಿಗದೆ ಬಹಳಷ್ಟು ತೊಂದರೆ ಆಗುತ್ತಿರುವುದನ್ನು ಗಮನಿಸಿ ನಾನು ಮತ್ತು ನನ್ನ ಸ್ನೇಹಿತರಾದ ನಿರಂಜನ್‌ರಾವ್‌ ಕದಂ,  ಚಂದ್ರಶೇಖರ್‌ ಹಾಗೂ ಬಿ.ಡಿ.ಶೆಣೈ ನಮ್ಮ ಬಳಿ ಇದ್ದ 100ರ ನೋಟುಗಳನ್ನು ಒಟ್ಟುಗೂಡಿಸಿ ಹಂಚಲು ನಿರ್ಧರಿಸಿದೆವು’ ಎಂದು ಕೃಷ್ಣೋಜಿರಾವ್‌ ಹೇಳಿದ್ದಾರೆ.

ಹೊಸದಾದ 2000 ನೋಟನ್ನು ಚಿಲ್ಲರೆ ಮಾಡಿಸಿಕೊಳ್ಳಲು ಸಹ ಅನೇಕರು ಬಂದಿದ್ದರು. ಆದರೆ ಅವರಿಗೆ ಹೊರಗಡೆ ಚಿಲ್ಲರೆ ಸಿಗುವ ಅವಕಾಶ ಹೆಚ್ಚಿರುವುದರಿಂದ, ರದ್ದಾದ ನೋಟುಗಳಿಗೆ ಮಾತ್ರ ಚಿಲ್ಲರೆ ವಿತರಿಸಲಾಯಿತು’ ಎಂದು ಮಾಹಿತಿ ನೀಡಿದರು. ನಮ್ಮ ಬಳಿಯಿದ್ದ ಎಲ್ಲ ನೂರರ ನೋಟುಗಳನ್ನು ತಂದಿದ್ದೇವೆ. ಇತರರು ನಮ್ಮೊಂದಿಗೆ ಕೈಜೋಡಿಸಿದರೆ ಡಿಸೆಂಬರ್‌ 30ರವರೆಗೂ ರೋಗಿಗಳಿಗೆ ಅನುಕೂಲ ಕಲ್ಪಿಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ. ಆರ್ ಟಿ ನಗರ ನಿವಾಸಿಯಾದ ಕೃಷ್ಣೋಜಿರಾವ್ ನಿನ್ನೆ ಸುಮಾರು 150 ಮಂದಿಗೆ ಚಿಲ್ಲರೆ ನೀಡಿ ಸಹಾಯ ಮಾಡಿದ್ದಾರೆ. ಹಲವು ಅಂತಾರಾಷ್ಟ್ರೀಯ ಗಾಳಿಪಟ ಹಾರಾಟ ಸ್ಪರ್ಧೆಯಲ್ಲಿ ಕೃಷ್ಣೋಜಿ ರಾವ್ ಭಾಗವಹಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ