ಸಾಂದರ್ಭಿಕ ಚಿತ್ರ 
ರಾಜ್ಯ

ಎಟಿಎಂಗಳಲ್ಲಿ 2 ಸಾವಿರ ರು ನೋಟುಗಳದ್ದೇ ಕಾರುಬಾರು: ಚಿಲ್ಲರೆಗಾಗಿ ಬೆಂಗಳೂರಿಗರ ಪರದಾಟ

500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ...

ಬೆಂಗಳೂರು: 500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ಎಟಿಎಂಗಳಿವೆ, ಅದರಲ್ಲಿ  ಕೇವಲ ಶೇ.70 ರಷ್ಟು ಎಟಿಎಂ ಗಳಲ್ಲಿ ಮಾತ್ರ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ.

ಅದರಲ್ಲಿ ಕೇವಲ ಶೇ. 20  ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ತುಂಬಲಾಗುತ್ತದೆ. ಇದರಿಂದ ಜನ ರೋಸಿ ಹೋಗುತ್ತಿದ್ದಾರೆ. ಕೆಲವೇ ಕೆಲವು ಎಟಿಎಂ ಗಳಲ್ಲಿ ಮಾತ್ರ 500 ಹಾಗೂ 100 ರು ನೋಟು ಸಿಗುತ್ತಿವೆ, ಉಳಿದಂತೆ ಎಲ್ಲಾ ಎಟಿಎಂ ಗಳಲ್ಲೂ 2 ಸಾವಿರ ರು ನೋಟುಗಳು ಮಾತ್ರ ಸಿಗುತ್ತಿವೆ. ಹೀಗಾಗಿ ಚಿಲ್ಲರೆಗಾಗಿ ಇನ್ನಿಲ್ಲದ ಪ್ರಯಾಸ ಪಡುವಂತಾಗಿದೆ.

ಬೆಂಗಳೂರಿನಲ್ಲಿ ನಮ್ಮ ಬ್ಯಾಂಕಿನ 861 ಎಟಿಎಂಗಳಿವೆ, ಅದರಲ್ಲಿ 600 ಎಟಿಎಂಗಳಿಗೆ ಮಾತ್ರ ಹಣ ತುಂಬಲು ಸಾಧ್ಯವಾಗಿದೆ, ಮಂಗಳವಾರ 350 ಎಟಿಎಂಗಳಲ್ಲಿ ಹಣ ಇತ್ತು, ಬುಧವಾರ ಕೇವಲ 190 ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯವಾಗಿತ್ತು. ಹಣದ ಅಭಾವ ತಲೆದೋರಿದೆ ಎಂದು ಪ್ರಸಿದ್ಧ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಅಷ್ಟುದ್ದ ಇದ್ದ ಕ್ಯೂಗಳು ಇಂದು ಇಲ್ಲ, ಮುಂದಿನ ದಿನಗಳಲ್ಲಿ ಈ ಎಲ್ಲಾ ತೊಂದರೆಗಳು ನಿವಾರಣೆಯಾಗಲಿವೆ ಎಂದು ಹೇಳಿದ್ದಾರೆ.

ಕಳೆದ ವಾರ ಎಟಿಎಂ ಮುಂದೆ ಸುಮಾರು 100 ಜನ ನಿಲ್ಲುತ್ತಿದ್ದರು, ಆದರೆ ಈಗ ಎಟಿಎಂ ಮುಂದೆ 20 ಮಾತ್ರ ಇರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT