ಸಾಂದರ್ಭಿಕ ಚಿತ್ರ 
ರಾಜ್ಯ

ಎಟಿಎಂಗಳಲ್ಲಿ 2 ಸಾವಿರ ರು ನೋಟುಗಳದ್ದೇ ಕಾರುಬಾರು: ಚಿಲ್ಲರೆಗಾಗಿ ಬೆಂಗಳೂರಿಗರ ಪರದಾಟ

500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ...

ಬೆಂಗಳೂರು: 500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ಎಟಿಎಂಗಳಿವೆ, ಅದರಲ್ಲಿ  ಕೇವಲ ಶೇ.70 ರಷ್ಟು ಎಟಿಎಂ ಗಳಲ್ಲಿ ಮಾತ್ರ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ.

ಅದರಲ್ಲಿ ಕೇವಲ ಶೇ. 20  ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ತುಂಬಲಾಗುತ್ತದೆ. ಇದರಿಂದ ಜನ ರೋಸಿ ಹೋಗುತ್ತಿದ್ದಾರೆ. ಕೆಲವೇ ಕೆಲವು ಎಟಿಎಂ ಗಳಲ್ಲಿ ಮಾತ್ರ 500 ಹಾಗೂ 100 ರು ನೋಟು ಸಿಗುತ್ತಿವೆ, ಉಳಿದಂತೆ ಎಲ್ಲಾ ಎಟಿಎಂ ಗಳಲ್ಲೂ 2 ಸಾವಿರ ರು ನೋಟುಗಳು ಮಾತ್ರ ಸಿಗುತ್ತಿವೆ. ಹೀಗಾಗಿ ಚಿಲ್ಲರೆಗಾಗಿ ಇನ್ನಿಲ್ಲದ ಪ್ರಯಾಸ ಪಡುವಂತಾಗಿದೆ.

ಬೆಂಗಳೂರಿನಲ್ಲಿ ನಮ್ಮ ಬ್ಯಾಂಕಿನ 861 ಎಟಿಎಂಗಳಿವೆ, ಅದರಲ್ಲಿ 600 ಎಟಿಎಂಗಳಿಗೆ ಮಾತ್ರ ಹಣ ತುಂಬಲು ಸಾಧ್ಯವಾಗಿದೆ, ಮಂಗಳವಾರ 350 ಎಟಿಎಂಗಳಲ್ಲಿ ಹಣ ಇತ್ತು, ಬುಧವಾರ ಕೇವಲ 190 ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯವಾಗಿತ್ತು. ಹಣದ ಅಭಾವ ತಲೆದೋರಿದೆ ಎಂದು ಪ್ರಸಿದ್ಧ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಅಷ್ಟುದ್ದ ಇದ್ದ ಕ್ಯೂಗಳು ಇಂದು ಇಲ್ಲ, ಮುಂದಿನ ದಿನಗಳಲ್ಲಿ ಈ ಎಲ್ಲಾ ತೊಂದರೆಗಳು ನಿವಾರಣೆಯಾಗಲಿವೆ ಎಂದು ಹೇಳಿದ್ದಾರೆ.

ಕಳೆದ ವಾರ ಎಟಿಎಂ ಮುಂದೆ ಸುಮಾರು 100 ಜನ ನಿಲ್ಲುತ್ತಿದ್ದರು, ಆದರೆ ಈಗ ಎಟಿಎಂ ಮುಂದೆ 20 ಮಾತ್ರ ಇರುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT