2017 
ರಾಜ್ಯ

2017 ಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಸಾರ್ವತ್ರಿಕ ರಜೆ ಪಟ್ಟಿ ವಿವರ

2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ....

ಬೆಂಗಳೂರು: 2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

22 ಸಾರ್ವತ್ರಿಕ ರಜಾ ದಿನ ಹಾಗೂ 17 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಲಾಗಿದೆ.  ಏಪ್ರಿಲ್ 9ರ ಮಹಾವೀರ ಜಯಂತಿ, ಅ.1 ರಂದು ಬರುವ ಮೊಹರಂ ಕಡೇ ದಿನ ಭಾನುವಾರ ಬಂದಿರುವುದರಿಂದ ರಜಾ ದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ.

ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿಪಡಿಸಿದ ದಿನಾಂಕದಂದು ಆಚರಣೆಯಾಗದಿದ್ದರೆ ಬದಲಿ ಹಬ್ಬದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 4 ರಂದು ಜರುಗುವ ಹುತ್ತರಿಹಬ್ಬ ಆಚರಣೆಯ ರಜೆಯನ್ನು ಕೊಡಗು ಜಿಲ್ಲೆಗೆ ಸೀಮಿತವಾಗಿ ಘೋಷಿಸಲಾಗಿದೆ.

ನೂತನ ವರ್ಷಾರಂಭವಾದ ಜನವರಿ 1, ಮಧ್ವನವಮಿಯ ಫೆಬ್ರವರಿ 5, ಹೋಳಿಹಬ್ಬ ಮಾರ್ಚ್ 12, ಏ.30 ಶಂಕರಾಚಾರ್ಯ ಜಯಂತಿ, ಸೆ. 17ರ ವಿಶ್ವಕರ್ಮ ಜಯಂತಿ, ಡಿ.24ರ ಕ್ರಿಸ್‍ಮಸ್ ಈವ್ , ಏಪ್ರಿಲ್ 14ರ ಸೌರಮಾನ ಯುಗಾದಿ, ಮೇ 1 ರಂದು ರಾಮಾನುಜಾಚಾರ್ಯರ ಜಯಂತಿ ರಜೆ ಪಟ್ಟಿಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜ.14 ರಂದು ಸಂಕ್ರಾಂತಿ ಹಬ್ಬ, ಜ.26 ಗಣರಾಜ್ಯೋತ್ಸವ, ಫೆ.24 ಮಹಾ ಶಿವರಾತ್ರಿ, ಮಾ.29 ಚಂದ್ರಮಾನ ಯುಗಾದಿ, ಏ.14ಗುಡ್ ಫ್ರೈಡೆ, ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.29 ಬಸವ ಜಯಂತಿ, ಮೇ 1 ಕಾರ್ಮಿಕರ ದಿನಾಚರಣೆ, ಜೂ.26 ರಂಜಾನ್, ಆ.15 ಸ್ವಾತಂತ್ರ್ಯ ದಿನಾಚರಣೆ, ಆ.25 ವರಸಿದ್ಧಿ ವಿನಾಯಕ ವ್ರತ, ಸೆ.2 ಬಕ್ರೀದ್, ಸೆ.19 ಮಹಾಲಯ ಅಮಾವಾಸ್ಯೆ, ಸೆ.29 ಮಹಾನವಮಿ, ಆಯುಧಪೂಜೆ, ಸೆ.30 ವಿಜಯದಶಮಿ, ಅ.2 ಗಾಂಧಿಜಯಂತಿ, ಅ.5 ಮಹರ್ಷಿ ವಾಲ್ಮೀಕಿ ಜಯಂತಿ, ಅ.18 ನರಕ ಚತುರ್ದಶಿ, ಅ.20 ಬಲಿಪಾಡ್ಯಮಿ, ನ.1 ಕನ್ನಡ ರಾಜ್ಯೋತ್ಸವ, ನ.6 ಕನಕದಾಸ ಜಯಂತಿ, ಡಿ.1 ಈದ್ ಲಾದ್, ಡಿ.25 ಕ್ರಿಸ್‍ಮಸ್ ರಜೆಗಳನ್ನು ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT