ಯದುವೀರ್ ಗೆ ಪಾದ ಪೂಜೆ ಮಾಡುತ್ತಿರುವ ರಾಣಿ ತ್ರಿಶಿಕಾ ಕುಮಾರಿ 
ರಾಜ್ಯ

400 ವರ್ಷದ ಹಳೇಯ ಸಂಪ್ರದಾಯವನ್ನು ಮುಂದುವರಿಸಿದ ಯದುವೀರ್ ಒಡೆಯರ್

: 400 ವರ್ಷಗಳಿಂದ ನಡೆದು ಕೊಂಡು ಬಂದಿರುವ ಮೈಸೂರು ಮನೆತನದ ಖಾಸಗಿ ದರ್ಬಾರ್ ಅನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ...

ಮೈಸೂರು: 400 ವರ್ಷಗಳಿಂದ ನಡೆದು ಕೊಂಡು ಬಂದಿರುವ ಮೈಸೂರು ಮನೆತನದ ಖಾಸಗಿ ದರ್ಬಾರ್ ಅನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದುವರಿಸಿದ್ದಾರೆ.  ಅದರಂತೆ ದಸರಾ ಅಂಗವಾಗಿ ಶನಿವಾರ ಮೈಸೂರಿನ ಅಂಬ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಿಸಿದ್ದಾರೆ.

ರಾಜಮನೆತನದ ಸಂಬಂಧಿಕರೊಡನೆ ಅರಸರ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಯುತ್ತದೆ. ಯದುವೀರ್ ತಮ್ಮ ಪತ್ನಿ ತ್ರಿಶಿಕಾ ಕುಮಾರಿ ಜೊತೆ ನಡೆಸುತ್ತಿರುವ ಮೊದಲ ಖಾಸಗಿ ದರ್ಬಾರ್ ಇದಾಗಿದೆ. ಮುಂದಿನ 10 ದಿನಗಳ ಕಾಲ ಈ ಖಾಸಗಿ ದರ್ಬಾರ್ ನಡೆಯುತ್ತದೆ. ದಿನಕ್ಕೆ ಎರಡು ಬಾರಿ ಎರಡು ಬಾರಿ ಯಧುವೀರ್ ರಾಜ ಪೋಷಾಕು ಧರಿಸಿ ಅರಮನೆಯಲ್ಲಿ ರಾಜರ ಕತ್ತಿಯೊಂದಿಗೆ ಸಿಂಹಾಸನದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

ಚಾಮುಂಡಿ ತೊಟ್ಟಿಯಲ್ಲಿ ಸಾಂಪ್ರದಾಯಿಕ ಸ್ನಾನದ ನಂತರ ಬೆಳಗ್ಗೆ 5.50 ರಿಂದ 6.10 ಒಳಗೆ ಕನಕ ಧಾರಣೆ ನಡೆಯುತ್ತದೆ. ಅಂದರೆ ಸಿಂಹಾಸನಕ್ಕೆ ಚಿನ್ನದ ಜೋಡಿ ಸಿಂಹ ಮತ್ತು ಮೆಟ್ಟಿಲು ಹಾಗೂ ಗಂಡಬೇರುಂಢ ಜೋಡಿಸಿ ಪೂಜಾ ಕಾರ್ಯ ನಡೆಸಲಾಗುತ್ತದೆ. ಇದನ್ನು ಕನಕಧಾರಣೆ ಎನ್ನಲಾಗುತ್ತದೆ.

ಆನೆಗಳು, ಹಸು, ಕುದುರೆಗಳಿಗೆ ಅಲಂಕರಿಸಿ ಮೆರವಣಿಗೆ ಕರೆತರಲಾಗುತ್ತದೆ. ಪುರೋಹಿತರು, ವೇದ ಮಂತ್ರ ಹೇಳುತ್ತಿರುತ್ತಾರೆ, ಹೊಗಳು ಭಟರು ಬಹುಪರಾಕ್ ಹಾಕುತ್ತಿರುತ್ತಾರೆ. ಸಿಂಹಾಸನವೇರುವ ಸಂಪ್ರದಾಯದಂತೆ ನವಗ್ರಹ ಮತ್ತು ಕಳಸಾ ಪೂಜೆ ನಡೆಯುತ್ತದೆ. ಇದಾದ ನಂತರ ಯಧುವೀರ್ ಸಿಂಹಾಸನಕ್ಕೆ ನಮಸ್ಕರಿಸಿ ಆಸೀನರಾಗುತ್ತಾರೆ.

ಯದುವೀರ್ ಸಿಂಹಾಸನದ ಮೇಲೆ ಸುಮಾರು 20 ನಿಮಿಷಗಳ ಕಾಲ ಕುಳಿತು, ಸಾರ್ವಜನಿಕರಿಂದ ಹಾಗೂ ರಾಜ ಮನೆತನದವರಿಂದ ನಮಸ್ಕಾರ ಪಡೆಯುತ್ತಾರೆ. ಅನಂತರ ಸುಮಾರು 20 ದೇವಾಲಯಗಳಿಂದ ಬಂದ ಪ್ರಸಾದವನ್ನು ಯಧುವೀರ್ ಗೆ ನೀಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT