ಉಮೇಶ್ ರೆಡ್ಡಿ 
ರಾಜ್ಯ

ನಾನು ಅಪಘಾತದಲ್ಲಿ ಸತ್ತಿದ್ದೇನೆ ಅಂದುಕೋ: ತಾಯಿಗೆ ವಿಕೃತ ಕಾಮಿ ಉಮೇಶ್ ರೆಡ್ಡಿ

ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ ಮರಣದಂಡನೆ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತಗೊಂಡು ನೇಣಿಗೆ ಹತ್ತಿರವಾಗುತ್ತಿದ್ದು...

ಬೆಳಗಾವಿ: ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ ಮರಣದಂಡನೆ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತಗೊಂಡು ನೇಣಿಗೆ ಹತ್ತಿರವಾಗುತ್ತಿದ್ದು, ಈ ಮಧ್ಯೆ ತಾಯಿಗೆ ಫೋನ್ ಮಾಡಿ ತಾನು ಅಪಘಾತದಲ್ಲಿ ಸತ್ತಿರುವುದಾಗಿ ಭಾವಿಸುವಂತೆ ಹೇಳಿದ್ದಾನೆ.

ಇನ್ನು ಸುಪ್ರೀಂಕೋರ್ಟ್ ಆದೇಶ ಪ್ರತಿ ಉಮೇಶ್ ರೆಡ್ಡಿ ಕೈಸೇರಿದೆ. ಈ ಮಧ್ಯೆ ಉಮೇಶ್ ರೆಡ್ಡಿಗೆ ಮರಣ ದಂಡನೆ ವಿಧಿಸಿಲು ಬೆಂಗಳೂರಿನ 61ನೇ ಅಡಿಷನ್ ಸಿಟಿ ಸಿವಿಲ್ ಕೋರ್ಟ್ ಬ್ಲ್ಯಾಕ್ ವಾರೆಂಟ್ ಹೊರಡಿಸಬೇಕು. ಈ ವಾರೆಂಟ್ ಪಡೆಯಲು ಬೆಳಗಾವಿ ಜೈಲು ಅಧೀಕ್ಷಕರು ಟಿ. ಶೇಷ ಬೆಂಗಳೂರಿಗೆ ತೆರಳಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಉಮೇಶ್ ಗಲ್ಲು ಶಿಕ್ಷೆ ವಿಧಿಸುವ ಕಾರ್ಯ ನಡೆಯಲಿದ್ದು. ರೆಡ್ಡಿ ಮರಣದಂಡನೆ ಕುರಿತಂತೆ ಸಂಬಂಧಿಕರಿಗೆ ಸಹ ಎಲ್ಲಾ ರೀತಿಯ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ತನ್ನ ಕೊನೆಗಾಲ ಸಮೀಪಿಸುತ್ತಿದ್ದಂತೆ ತಾಯಿಗೆ ದೂರವಾಣಿ ಕರೆ ಮಾಡಿ 15 ನಿಮಿಷಗಳ ಕಾಲ ಮಾತನಾಡಿರುವ ಉಮೇಶ್, ರಸ್ತೆ ಅಪಘಾತದಲ್ಲಿ ಅನೇಕರು ಸಾಯುತ್ತಾರೆ. ಅದೇ ರೀತಿ ನನ್ನ ಸಾವು ಸಂಭವಿಸಿದೆ ಎಂದು ಭಾವಿಸುವಂತೆ ತಾಯಿಗೆ ಹೇಳಿಕೊಂಡಿದ್ದಾನೆ.

ನಾಸ್ತಿಕನಾಗಿದ್ದ ರೆಡ್ಡಿ ಇದೀಗ ದೇವರ ಮೊರೆ ಹೋಗಿದ್ದಾನಂತೆ. ಆಂಜನೇಯ ದೇವರ ಧ್ಯಾನದಲ್ಲಿ ಮಗ್ನನಾಗಿರುವ ರೆಡ್ಡಿ ಪ್ರತಿ ದಿನ ಎರಡು ಬಾರಿ ದೇವರ ದರ್ಶನ ಪಡೆಯುತ್ತಿದ್ದಾನೆ. ಇನ್ನು ರೆಡ್ಡಿ ಬಳಸುತ್ತಿದ್ದ ಬುಕ್, ಫೋಟೋ ಆಲ್ಬಮ್ ಗಳನ್ನು ಜೈಲಿನ ಅಧಿಕಾರಿಗಳಿಗೆ ವಾಪಸ್ ನೀಡಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT