ತಾಮ್ರ ಶಾಸನ 
ರಾಜ್ಯ

ಶಿವಮೊಗ್ಗ: 17ನೇ ಶತಮಾನದ ಕೆಳದಿ ಶಿವಪ್ಪ ನಾಯಕನ ತಾಮ್ರ ಶಾಸನ ಪತ್ತೆ

17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ..,.

ಶಿವಮೊಗ್ಗ: 17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ.

ಸಾಗರ ತಾಲೂಕಿನ ಆನಂದಪುರಂ ಗ್ರಾಮದ ಬಳಿಯ ಯಡಹಳ್ಳಿ ಬಳಿ ಈ ಶಾಸನ ಪತ್ತೆಯಾಗಿದೆ. 6.5 ಇಂಚು ಅಗಲ, 10 ಇಂಚು ಉದ್ದ. 0.5 ಮಿಮಿ ದಪ್ಪ ಇರುವ ಶಾಸನ ಇದಾಗಿದೆ. ಶಾಸನವದ ಮುಂಭಾಗದಲ್ಲಿ 33 ಸಾಲು ಹಾಗೂ ಶಾಸನದ ಹಿಂಭಾಗದಲ್ಲಿ 17 ಸಾಲುಗಳಲ್ಲಿ ಬರೆಯಲಾಗಿದೆ.

ಕೆಳದಿ ಸಂಸ್ಥಾನಕ್ಕೆ ಸೇರಿದ ಶಾಸನ ಇದಾಗಿದ್ದು, ವೀರಭದ್ರ ನಾಯಕ,  ಆತನ ಮೊಮ್ಮಗ ವೆಂಕಟಪ್ಪ ನಾಯಕ ಮತ್ತು ಆತನ ಮಗ ಭದ್ರಪ್ಪ ನಾಯಕನ ಆಡಳಿತದ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

1632 ರಲ್ಲಿ ವೀರಭದ್ರ ನಾಯಕ ಹರತಾಳ ಪ್ರದೇಶದಲ್ಲಿರುವ ಆನಂದಪುರದ ಸಿದ್ದಲಿಂಗ ದೇವರು ಮತ್ತು ಉತ್ತರಾದಿ ದೇವರುಗಳಿಗೆ ಭೂಮಿಯನ್ನು ಶ್ರಾವಣ ತಿಂಗಳಿನ 15 ನೇ ದಿನ ದಾನವಾಗಿ ನೀಡಿದ್ದರು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!