ತಾಮ್ರ ಶಾಸನ 
ರಾಜ್ಯ

ಶಿವಮೊಗ್ಗ: 17ನೇ ಶತಮಾನದ ಕೆಳದಿ ಶಿವಪ್ಪ ನಾಯಕನ ತಾಮ್ರ ಶಾಸನ ಪತ್ತೆ

17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ..,.

ಶಿವಮೊಗ್ಗ: 17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ.

ಸಾಗರ ತಾಲೂಕಿನ ಆನಂದಪುರಂ ಗ್ರಾಮದ ಬಳಿಯ ಯಡಹಳ್ಳಿ ಬಳಿ ಈ ಶಾಸನ ಪತ್ತೆಯಾಗಿದೆ. 6.5 ಇಂಚು ಅಗಲ, 10 ಇಂಚು ಉದ್ದ. 0.5 ಮಿಮಿ ದಪ್ಪ ಇರುವ ಶಾಸನ ಇದಾಗಿದೆ. ಶಾಸನವದ ಮುಂಭಾಗದಲ್ಲಿ 33 ಸಾಲು ಹಾಗೂ ಶಾಸನದ ಹಿಂಭಾಗದಲ್ಲಿ 17 ಸಾಲುಗಳಲ್ಲಿ ಬರೆಯಲಾಗಿದೆ.

ಕೆಳದಿ ಸಂಸ್ಥಾನಕ್ಕೆ ಸೇರಿದ ಶಾಸನ ಇದಾಗಿದ್ದು, ವೀರಭದ್ರ ನಾಯಕ,  ಆತನ ಮೊಮ್ಮಗ ವೆಂಕಟಪ್ಪ ನಾಯಕ ಮತ್ತು ಆತನ ಮಗ ಭದ್ರಪ್ಪ ನಾಯಕನ ಆಡಳಿತದ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

1632 ರಲ್ಲಿ ವೀರಭದ್ರ ನಾಯಕ ಹರತಾಳ ಪ್ರದೇಶದಲ್ಲಿರುವ ಆನಂದಪುರದ ಸಿದ್ದಲಿಂಗ ದೇವರು ಮತ್ತು ಉತ್ತರಾದಿ ದೇವರುಗಳಿಗೆ ಭೂಮಿಯನ್ನು ಶ್ರಾವಣ ತಿಂಗಳಿನ 15 ನೇ ದಿನ ದಾನವಾಗಿ ನೀಡಿದ್ದರು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT