ಜಿ ಮಾದೇಗೌಡ (ಸಂಗ್ರಹ ಚಿತ್ರ) 
ರಾಜ್ಯ

ನ್ಯಾಯಾಂಗದ ಕೆಲಸವೇ ಅಲ್ಲ; ಆದರೂ ತೀರ್ಪು; ಸುಪ್ರೀಂ ತೀರ್ಪಿನ ವಿರುದ್ಧ ಮಾದೇಗೌಡ ಅಸಮಾಧಾನ

ಕಾವೇರಿ ವಿವಾದವೇನಿದ್ದರೂ ನ್ಯಾಯಾಧಿಕರಣದ ಮೂಲಕ ಬಗೆಹರಿಯಬೇಕೇ ಹೊರತು ನ್ಯಾಯಾಂಗದ ಮೂಲಕವಲ್ಲ. ಮದ್ಯಂತರ ಆದೇಶ ನ್ಯಾಯಾಂಗದ ಕೆಲಸವೇ ಅಲ್ಲ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ಕಾವೇರಿ ವಿವಾದವೇನಿದ್ದರೂ ನ್ಯಾಯಾಧಿಕರಣದ ಮೂಲಕ ಬಗೆಹರಿಯಬೇಕೇ ಹೊರತು ನ್ಯಾಯಾಂಗದ ಮೂಲಕವಲ್ಲ. ಮದ್ಯಂತರ ಆದೇಶ ನ್ಯಾಯಾಂಗದ ಕೆಲಸವೇ ಅಲ್ಲ ಆದರೂ  ನೀರು ಬಿಡುವ ಸಂಬಂಧ ತೀರ್ಪು ನೀಡಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾದೇಗೌಡ ಅವರು, ಸುಪ್ರೀಂ ಕೋರ್ಟ್ ನ ತೀರ್ಪನ್ನು ಮೊದಲೇ ಶಂಕಿಸಿದ್ದೆ. ಕಾವೇರಿ  ನದಿ ನೀರು ವಿಚಾರವಾಗಿ ತೀರ್ಪು ನೀಡುವುದು ನ್ಯಾಯಾಂಗದ ಕೆಲಸವಲ್ಲ. ಆದೇನಿದ್ದರೂ ನ್ಯಾಯಾಧಿಕರಣ ಅಥವಾ ಕಾವೇರಿ ಮೇಲುಸ್ತುವಾರಿ ಕೆಲಸವಾಗಿದೆ. ಹೀಗಿದ್ದೂ ನ್ಯಾಯಾಲಯ ತೀರ್ಪು  ನೀಡಿದೆ. ಸುಪ್ರೀಂ ಕೋರ್ಟ್ ಗೆ ಮದ್ಯಂತರ ಅರ್ಜಿಗಳನ್ನು ಸಲ್ಲಿಸುವುದರಿಂದ ಅಥವಾ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದರಿಂದ ಯಾವುದೇ ಲಾಭವಿಲ್ಲ ಎಂದು ಮಾದೇಗೌಡ  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

Techie Kidnap case: Lakshmi Menonಗೆ ಬಿಗ್ ರಿಲೀಫ್, ನಿರೀಕ್ಷಣಾ ಜಾಮೀನು ಮಂಜೂರು, ಏನಿದು ಪ್ರಕರಣ? ನಟಿ ಹೇಳಿದ್ದೇನು?

SCROLL FOR NEXT