ಭಾಷೆ ಬೇರೆಯಾದರೂ ಕರ್ನಾಟಕಕ್ಕಾಗಿ ಧನಿಗೂಡಿಸಿದ ತಮಿಳಿಗರು! 
ರಾಜ್ಯ

ಭಾಷೆ ಬೇರೆಯಾದರೂ ಕರ್ನಾಟಕಕ್ಕಾಗಿ ದನಿಗೂಡಿಸಿದ ತಮಿಳಿಗರು!

ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನೆರೆ ರಾಜ್ಯಗಳ ಸಂಬಂಧವನ್ನು ಹಾಳಾಗುವಂತೆ ಮಾಡಿದೆ. ಈಗಲು ಎರಡು ರಾಜ್ಯಗಳ ಮಧ್ಯೆ ಕಾವೇರಿ ಎಂಬ...

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನೆರೆ ರಾಜ್ಯಗಳ ಸಂಬಂಧವನ್ನು ಹಾಳಾಗುವಂತೆ ಮಾಡಿದೆ. ಈಗಲು ಎರಡು ರಾಜ್ಯಗಳ ಮಧ್ಯೆ ಕಾವೇರಿ ಎಂಬ ಶತ್ರುತ್ವ ಬೆಂಕಿ ಹೊಗೆಯಾಡುತ್ತಲೇ ಇದೆ.

ರಾಜ್ಯದಲ್ಲಿಯೇ ನೆಲೆಯೂರಿ ಇಲ್ಲಿನ ರಾಜ್ಯದ ಪರಿಸ್ಥಿತಿ ಹಾಗೂ ಕನ್ನಡಿಗರ ಸಂಕಷ್ಟವನ್ನು ಅರಿತಿರುವ ತಮಿಳಿಗರು ಇದೀಗ ಕರ್ನಾಟಕದ ಹೋರಾಟಕ್ಕೆ ಧನಿ ಗೂಡಿಸಿದ್ದಾರೆ. ನಗರದಲ್ಲಿ ನೆಲೆಯೂರಿರುವ ತಮಿಳಿಗರು ಎರಡು ರಾಜ್ಯಗಳಲ್ಲಿ ಎದುರಾಗಿರುವ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮೂಲದವರಾಗಿದ್ದು ನಗರದಲ್ಲೇ ಕಳೆದ 15 ವರ್ಷಗಳಿಂದಲೂ ನೆಲೆಯೂರಿರುವ ರಂಜಿತಮ್ಮ (92) ಎರಡು ರಾಜ್ಯಗಳಲ್ಲಿ ಎದುರಾಗಿರುವ ಪರಿಸ್ಥಿತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ನೀರು ಹೆಚ್ಚಾಗಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಸರಿ ಎನ್ನಬಹುದಿತ್ತು. ಆದರೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ನಾವು ಇಂದು ಸಂಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಅಲಿಸ್ ರೆಬೇಕಾ ಎಂಬುವವರು ಮಾತನಾಡಿ, ತಮಿಳುನಾಡಿಗೆ ನೀರು ಬಿಡುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿರುವ ಜನರ ಸಂಕಷ್ಟದ ಕೂಗನ್ನು ಕೇಳಲಿ. ಮುಖ್ಯಮಂತ್ರಿಗಳು ಜನರ ಸಂಕಷ್ಟವನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿದ್ದಾರೆ.

ಪುಷ್ಪ ಎಂಬುವವರು ಮಾತನಾಡಿ, ತಮಿಳುನಾಡು ಸರ್ಕಾರ ಕಾವೇರಿ ನೀರನ್ನು ಕೇಳುವ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಕಷ್ಟವನ್ನು ಎದುರಾಗುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಮರುಧು ಎಂಬುವವರು ಮಾತನಾಡಿ, 1991ರಿಂದಲೂ ಕಾವೇರಿ ವಿವಾದ ಎರಡು ರಾಜ್ಯಗಳ ತಲೆದೋರಿದೆ. ಕರ್ನಾಟಕ ರಾಜ್ಯದಲ್ಲಿ ತಮಿಳುನಾಡಿನ ಜನರೂ ಇದ್ದಾರೆ. ಕಾವೇರಿ ವಿಚಾರದಲ್ಲಿ ಇಲ್ಲಿನ ರಾಜ್ಯಕ್ಕೆ ತೊಂದರೆಯಾದರೆ ನಮಗೂ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.

ಕಾವೇರಿ ವಿವಾದ ಕುರಿತಂತೆ ನಿಯಂತ್ರಣ ತಪ್ಪಿ ಹೋರಾಟಗಳು ನಡೆಯುತ್ತಿದೆ. ನಗರ ಯಾವಾಗಲೂ ಶಾಂತಿಯುತವಾಗಿರಬೇಕು. ಬೆಂಗಳೂರು ನಗರದ ವರ್ಚಸ್ಸು ಹಾಳು ಮಾಡಲು ಗೂಂಡಾಗಳಿಗೆ ಅವಕಾಶ ನೀಡಬಾರದು ಎಂದು ರಾಧಾ ಎಂಬುವವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT