ಸಾಂದರ್ಭಿಕ ಚಿತ್ರ 
ರಾಜ್ಯ

ತೆಂಗು ಬೆಳೆಗಾರರಿಗೆ ಸಂತೋಷದ ಸುದ್ದಿ: ನೀರಾ ನೀತಿಗೆ ಸಂಪುಟ ಅನುಮೋದನೆ

ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ತೆಂಗು ಬೆಳೆಗಾರರು ನೀರಾ ಇಳಿಸುವಂತೆ ಅನುವು ಮಾಡಿಕೊಡಲು ‘ನೀರಾ ನೀತಿ’ಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ...

ಬೆಂಗಳೂರು: ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ ತೆಂಗು ಬೆಳೆಗಾರರು ನೀರಾ ಇಳಿಸುವಂತೆ ಅನುವು ಮಾಡಿಕೊಡಲು ‘ನೀರಾ ನೀತಿ’ಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ನೀರಾ ಇಳಿಸಲು ಸಮಗ್ರ ಕಾನೂನೊಂದನ್ನು ಜಾರಿಗೆ ತರಬೇಕೆಂಬುದು ರೈತರ ಹಲವು ದಿನಗಳ ಬೇಡಿಕೆಯಾಗಿತ್ತು ಎಂದರು .

ಈ ನೀತಿ ಅನ್ವಯ ಸೀಮಿತ ಪ್ರಮಾಣದಲ್ಲಿ ನೀರಾ ಉತ್ಪಾದನೆ ಮಾಡಿ ಮಾರಾಟ ಮಾಡಲು ಸಂಘ– ಸಂಸ್ಥೆಗಳಿಗೆ ಅವಕಾಶ ಕೊಡಲಾಗುವುದು ಎಂದು ತಿಳಿಸಿದರು.

ನೀರಾ ಇಳಿಸುವುದರಿಂದ ತೆಂಗಿನ ಮರಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ. ನೀರಾ ಇಳಿಸುವುದರಿಂದ ಅವುಗಳ ಉತ್ಪನ್ನಗಳಿಂಗ ರೈತರಿಗೆ ಹೆಚ್ಚುವರಿ ಲಾಭ ಸಿಗುತ್ತದೆ ಎಂದು ಹೇಳಿದ ಅವರು ನೀರಾವನ್ನು ಪ್ಯಾಕೆಟ್ ಗಳಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆಯೆಂದು ತಿಳಿಸಿದರು.

ನೀರಾ ಇಳಿಸುವವರು ಮತ್ತು ಮಾರಾಟ ಮಾಡುವವರು ತೆಂಗು ಬೆಳೆಗಾರರ ಒಕ್ಕೂಟದ ಸದಸ್ಯರಾಗಿರಬೇಕು ಎಂಬ ಷರತ್ತು ಹಾಕಲಾಗುವುದು ಎಂದ ಅವರು ತಿಳಿಸಿದರು.

 ರಾಜ್ಯದಲ್ಲಿ  12 ಸಂಸ್ಥೆಗಳು ನೀರಾ ಉತ್ಪಾದನೆಗೆ ಮುಂದೆ ಬಂದಿವೆ. ನೀರಾ ಸಂಸ್ಕರಣೆ, ರಫ್ತಿಗೆ ಕೂಡ ಅವಕಾಶ ಸಿಗಲಿದೆ ಎಂದು  ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಇರಾನ್ ಮೇಲೆ ಮತ್ತೆ ಅಮೆರಿಕಾ ದಾಳಿ; ಇರಾನ್ ಕಠಿಣ ಕ್ರಮ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್..!

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಸೀಕ್ರೆಟ್ ಆಪರೇಷನ್: ಇರಾನ್‌ಗೇ ಗೊತ್ತಾಗದಂತೆ 10 ಕೋಟಿ ಬ್ಯಾರೆಲ್ ತೈಲ ಸಾಗಣೆ..!

140 ಕೋಟಿ ಭಾರತೀಯರ ಆಶೀರ್ವಾದ ನನ್ನ ದೊಡ್ಡ ಶಕ್ತಿ: Narendra Modi

ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ, 3 ಭಾರತೀಯರು ನಾಪತ್ತೆ: ಅಮೆರಿಕದ ರಾಜತಾಂತ್ರಿಕರಿಗೆ ಭಾರತ ಸಮನ್ಸ್

ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಶಿವಕುಮಾರ್: Metro ವಿಸ್ತರಣೆ, ಡಬಲ್ ಡೆಕ್ಕರ್ ಸೇರಿ ಹಲವು ಯೋಜನೆಗಳ ಅನುಮತಿಗೆ ಮನವಿ!

SCROLL FOR NEXT