ಸಾಂದರ್ಭಿಕ ಚಿತ್ರ 
ರಾಜ್ಯ

ಸಂಚಾರ ನಿಯಮ ಉಲ್ಲಂಘನೆ: ಈಗ ಕಾರ್ಡ್ ಮೂಲಕ ದಂಡ ಪಾವತಿಸಬಹುದು!

ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಉಜ್ಜಿ ವಾಹನ ಚಾಲಕರು ಇನ್ನು ಮುಂದೆ...

ಬೆಂಗಳೂರು: ಸ್ಥಳದಲ್ಲೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳನ್ನು ಉಜ್ಜಿ ವಾಹನ ಚಾಲಕರು ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಸಬಹುದು.
ಬೆಂಗಳೂರು ಸಂಚಾರಿ ಪೊಲೀಸರು ನಿನ್ನೆ ಖಾಸಗಿ ಡಿಜಿಟಲ್ ಸಹಾಯಕ ಸಾಧನವನ್ನು ಆರಂಭಿಸಿದರು. ಸಂಚಾರಿ ಪೊಲೀಸರು ಈಗಾಗಲೇ 650ರಲ್ಲಿ  75 ಪಿಡಿಎ ಸಾಧನಗಳನ್ನು  ಬಳಸಲು ಆರಂಭಿಸಿದ್ದಾರೆ. ಏಪ್ರಿಲ್ ಕೊನೆಗೆ ಉಳಿದ ಸಾಧನಗಳು ಕಾರ್ಯನಿರ್ವಹಿಸಲು ಆರಂಭಿಸಲಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಹಣ ಪಾವತಿ ಮಾಡದಿರುವವರನ್ನು ಕಂಡುಹಿಡಿದು ದಂಡ ಹಾಕುತ್ತಿದ್ದ ಬ್ಲಾಕ್ ಬೆರ್ರಿ ಸಾಧನದ ಜಾಗದಲ್ಲಿ ಈ ಹೊಸ ಸಾಧನ ಬರಲಿದೆ. 
ಇನ್ ಬಿಲ್ಟ್ ಪ್ರಿಂಟರ್, ಕ್ಯಾಮರಾ ಮತ್ತು ಜಾರಿ ಅರ್ಜಿಗಳನ್ನು ಈ ಹೊಸ ಸಾಧನ ಒಳಗೊಂಡಿರುತ್ತದೆ. ಪ್ರಸ್ತುತ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಾಯಿಂಟ್ ಆಫ್ ಸೇಲ್ ಮೆಶಿನ್ ಗಳು ಮಾತ್ರ ಸಿಗುತ್ತವೆ.
ಜಾರಿಗೆ ಬರದಿರುವ ಬಿಎಂಟಿಸಿಯ ನಗದುರಹಿತ ಯೋಜನೆ: ನಗದುರಹಿತ ಪ್ರಯಾಣ ಯೋಜನೆಯ ಆರಂಭಕ್ಕೆ ನೀಡಲಾಗಿದ್ದ ಗಡುವನ್ನು ಬಿಎಂಟಿಸಿ ಮತ್ತೆ ಮುರಿದಿದೆ. ಮಾರ್ಚ್ ಕೊನೆಯ ವೇಳೆಗೆ ಸ್ಮಾರ್ಟ್ ಕಾರ್ಡು ಸೌಲಭ್ಯವನ್ನು ಆರಂಭಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ಹೇಳಿದ್ದರು. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ಬಿಎಂಟಿಸಿ ತನ್ನ ಸ್ಮಾರ್ಟ್ ಕಾರ್ಡು ಸೌಲಭ್ಯವನ್ನು ಎಸಿ ವೊಲ್ವೊ ಬಸ್ ನಲ್ಲಿ 335-ಇ ಮಾರ್ಗದಲ್ಲಿ (ಕೆಂಪೇಗೌಡ ಬಸ್ ನಿಲ್ದಾಣದಿಂದ  ಕಾಡುಗೋಡಿ) ಪ್ರಾಯೋಗಿಕ ಆಧಾರದಲ್ಲಿ 100 ಪ್ರಯಾಣಿಕರಿಗೆ ನೀಡಲು ನಿರ್ಧರಿಸಿತ್ತು.
ಸೆಲ್ಫಿ ವಿತ್ ಮೈ ಬಿಎಂಟಿಸಿ: ಬಿಎಂಟಿಸಿಯ 87ನೇ ಬಸ್ ದಿನದ ಅಂಗವಾಗಿ ಬೆಂಗಳೂರಿನ ಎನ್ ಜಿಒ ಕಾರ್ಯಕರ್ತರು ಸೆಲ್ಫಿ ವಿತ್ ಮೈ ಬಿಎಂಟಿಸಿ ಆರಂಭಿಸಿದ್ದಾರೆ. ಬಸ್ ನ್ನು ನಗರದ ನಾಗರಿಕರು ಪ್ರಾಥಮಿಕ ಪ್ರಯಾಣ ವಾಹನವನ್ನಾಗಿ ಬಳಸಿಕೊಳ್ಳಬೇಕೆಂಬುದು ಇದರ ಉದ್ದೇಶ. ಕಾರ್ಯಕರ್ತರು ಟಿಕೆಟ್ ಖರೀದಿಸಿ ಬಿಎಂಟಿಸಿ ಬಸ್ ನಲ್ಲಿ  ಪ್ರಯಾಣಿಸುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಎಂಟಿಸಿ ಕೆ.ಆರ್ ಮಾರ್ಕೆಟ್ ನಿಂದ ಶ್ರೀ ಎಂ. ವಿಶ್ವೇಶ್ವರಯ್ಯ ಲೇ ಔಟ್ 9ನೇ ಬ್ಲಾಕ್ 235 ಎಬಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಶ್ವೇಶ್ವರಯ್ಯ ಲೇ ಔಟ್ 238 ಯುಸಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಲಿಂಗದೀರನಹಳ್ಳಿಗೆ 243ಎಲ್ ಮತ್ತು ಕೆ.ಆರ್.ಮಾರ್ಕೆಟ್ ನಿಂದ ಮರಳವಾಡಿಗೆ 213 ಡಬ್ಲ್ಯು ಬಸ್ ಸಂಚಾರ ಆರಂಭಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT