ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದ ಮಾವು ಅಮೆರಿಕಾಗೆ ರಫ್ತು

ಅಮೆರಿಕನ್ನರ ಊಟದ ತಟ್ಟೆಗೆ ಸದ್ಯದಲ್ಲಿಯೇ ರಾಜ್ಯದ ರೈತರು ಬೆಳೆದ ಮಾವು ತಲುಪಲಿದೆ. ಈ ವರ್ಷ...

ಬೆಂಗಳೂರು: ಅಮೆರಿಕನ್ನರ ಊಟದ ತಟ್ಟೆಗೆ ಸದ್ಯದಲ್ಲಿಯೇ ರಾಜ್ಯದ ರೈತರು ಬೆಳೆದ ಮಾವು ತಲುಪಲಿದೆ. ಈ ವರ್ಷ ರಾಜ್ಯದಿಂದ 2,000 ಟನ್ ಗಳಷ್ಟು ಮಾವು ರಫ್ತಾಗುವ ಸಾಧ್ಯತೆಯಿದೆ. ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಅಮೆರಿಕಾಕ್ಕೆ ಮಾವು ರಫ್ತಾಗುತ್ತಿರುವುದು ಇದೇ ಮೊದಲ ಸಲ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (ಕೆಎಸ್ಎಂಡಿಎಂಸಿ) ಈ ತಿಂಗಳ 15ರ ನಂತರ ವಿಮಾನ ಮೂಲಕ ಮಾವುಗಳನ್ನು ಕಳುಹಿಸಲು ತಯಾರಿ ನಡೆಸುತ್ತಿದೆ.
ನಮ್ಮ ದೇಶದಲ್ಲಿ ಕರ್ನಾಟಕ ಮಾವು ಬೆಳೆಯುವ ಪ್ರಮುಖ ರಾಜ್ಯ. 16 ಜಿಲ್ಲೆಗಳಲ್ಲಿ ಸುಮಾರು 1.7 ಲಕ್ಷ ಹೆಕ್ಟೇರ್ ಗಳಲ್ಲಿ ಮಾವು ಬೆಳೆಯಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ರಾಮನಗರ ಜಿಲ್ಲೆಗಳಲ್ಲಿ ಮಾವು ಬೆಳೆ ಅಧಿಕ.
ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 7.5 ಲಕ್ಷ ಟನ್ ಮಾವು ಬೆಳೆಯುವ ಸಾಧ್ಯತೆಯಿದೆ. ಈ ವರ್ಷ ಮಾವು ಬೆಳೆ ಬೇಗನೆ ಫಸಲು ಬಂದಿದ್ದು ಸುಮಾರು 8.5 ಲಕ್ಷ ಟನ್ ಬೆಳೆ ಬರುವ ನಿರೀಕ್ಷೆಯಿದೆ. 
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕೆಎಸ್ ಎಂಡಿಎಂಸಿಯ ವ್ಯವಸ್ಥಾಪಕ ನಿರ್ದೇಶಕ ಕದ್ರೆಗೌಡ, ಕಳೆದ ವರ್ಷದವರೆಗೆ ರಾಜ್ಯದಿಂದ ಮಾವು ಇಂಗ್ಲೆಂಡ್, ಆಸ್ಟ್ರೇಲಿಯಾ, ಗಲ್ಫ್ ರಾಷ್ಟ್ರಗಳು ಮತ್ತು ಮಲೇಷಿಯಾಕ್ಕೆ ರಫ್ತಾಗುತ್ತಿದ್ದವು. ಈ ವರ್ಷ 10,000 ಟನ್ ಮಾವುಗಳನ್ನು ರಫ್ತು ಮಾಡುವ ಗುರಿಯಿದೆ. ಈಗಾಗಲೇ ಅಮೆರಿಕಾದಿಂದ 2,000 ಟನ್ ಮಾವಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ.
ಆಲ್ಫೋನ್ಸೊ, ಬಂಗನಪಲ್ಲಿ, ಕೇಸರ್ ಮತ್ತು ದಶೆರಿ ಮೊದಲಾದ ತಳಿಯ ಮಾವುಗಳನ್ನು ಅಮೆರಿಕಾಕ್ಕೆ ಕಳುಹಿಸಲಾಗುತ್ತದೆ. ಕಳೆದ ವರ್ಷ ಕೂಡ ಮಾವುಗಳನ್ನು ಅಮೆರಿಕಕ್ಕೆ ಕಳುಹಿಸಲಾಗಿತ್ತು. ಆದರೆ ಅವು ಸ್ಯಾಂಪಲ್ ಗಳಷ್ಟೆ ಎಂದರು.
ರಾಜ್ಯದಿಂದ ಅಮೆರಿಕಕ್ಕೆ ರಫ್ತಾಗುವ ಮಾವನ್ನು ತಜ್ಞರ ತಂಡವೊಂದು ಪರೀಕ್ಷಿಸಿ ಒಪ್ಪಿಗೆ ನೀಡಿದೆ. ಸಹಜವಾಗಿ ಮಾವುಗಳನ್ನು ಹಣ್ಣು ಮಾಡಿ ಅವು ಕೆಡದಂತೆ ಇಡಲಾಗುತ್ತದೆ. ಅಮೆರಿಕಾದಲ್ಲಿನ ಮಾವಿನ ವಿಶೇಷಣಗಳನ್ನು ಈಡೇರಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ದೇಶಕ್ಕೆ ರಫ್ತಾಗುವ ನಿರೀಕ್ಷೆಯಿದೆ. ದಕ್ಷಿಣ ಕೊರಿಯಾಕ್ಕೂ ಕಳುಹಿಸುವ ಯೋಜನೆಯಿದೆ ಎಂದರು.
ತೋಟಗಾರಿಕಾ ಇಲಾಖೆಯ ಹಣ್ಣು ವಿಭಾಗದ ಮಾಜಿ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಬೇರೆ ದೇಶಗಳಲ್ಲಿ ಸಿಗುವ ಮಾವುಗಳು ಬಣ್ಣ ಚೆನ್ನಾಗಿರುತ್ತದೆ. ಆದರೆ ಕರ್ನಾಟಕದ ಮಾವುಗಳಿಗೆ ರುಚಿ ಹೆಚ್ಚು. ಹೀಗಾಗಿ ಭಾರತದ ಮಾವುಗಳಿಗೆ ವಿದೇಶಗಳಲ್ಲಿ ಬೇಡಿಕೆಯಿದೆ. ಟೋಮ್ಮಿ ಅಟ್ಕಿನ್ಸ್ ಮಾವು(ಫ್ಲೋರಿಡಾ), ಕೈಟ್ಟ್(ಫ್ಲೋರಿಡಾ), ಕೆನ್ಸಿಂಗ್ಟನ್ ಮಾವು(ಆಸ್ಟ್ರೇಲಿಯಾ) ಮೊದಲಾದವು ವಿದೇಶಗಳಲ್ಲಿ ಸಿಗುವ ಕೆಲವು ಮಾವುಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT