ರಾಜ್ಯ

ಭಟ್ಕಳ ರೈಲು ನಿಲ್ದಾಣದಲ್ಲಿ 18 ಲಕ್ಷ ನಿಷೇಧಿತ ನೋಟುಗಳು ವಶ

Shilpa D
ಭಟ್ಕಳ: ರೈಲ್ವೆ ಪೊಲೀಸರು ಮತ್ತು ನಾಗರಿಕ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಿ, 18 ಲಕ್ಷ ನಿಷೇಧಿತ ಹಣವನ್ನು ವಶ ಪಡಿಸಿಕೊಂಡಿದ್ದಾರೆ.
ಕೇರಳದ ಮಂಜೇಶ್ವರ ನಗರದ ಮೊಹಿದ್ದೀನ್ ಬಂಧಿತ ಆರೋಪಿ. ವಶ ಪಡಿಸಿಕೊಂಡಿರುವ 18 ಲಕ್ಷ ರು ಹಣ  ನಿಷೇಧಿತ 500 ಮತ್ತು 1 ಸಾವಿರು ಮುಖಬೆಲೆಯ ಹಳೇ ನೋಟುಗಳಾಗಿವೆ.
ನೇತ್ರಾವತಿ ರೈಲಿನಲ್ಲಿ ಗೋವಾದಿಂದ ಮಂಜೇಶ್ವರಕ್ಕೆ ಹಣವನ್ನು ಕೊಂಡೊಯ್ಯುತ್ತಿದ್ದುದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ.ನಿಷೇಧಿತ ನೋಟು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಭಟ್ಕಳ ರೈಲ್ವೆ ಪೊಲೀಸರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ಪೊಲೀಸರು ಪ್ರತ್ಯೇಕವಾಗಿ  ಕಳೆದ ರಾತ್ರಿ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ರೈಲು ನಿಲ್ದಾಣಕ್ಕೆ  ಆಗಮಿಸಿದ ಆರೋಪಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
SCROLL FOR NEXT