ಸಾಂದರ್ಭಿಕ ಚಿತ್ರ 
ರಾಜ್ಯ

1ನೇ ತರಗತಿ ದಾಖಲಾತಿಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಪರೀಕ್ಷೆ!

ನಗರದ ಕೆಲ ಶಾಲೆಗಳಲ್ಲಿ 1ನೇ ತರಗತಿ ಮತ್ತು ನರ್ಸರಿಗೆ ದಾಖಲಾಗುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತಿವೆ ಎಂದು ಆರೋಪಿಸಲಾಗಿದೆ. ಶಿಕ್ಷಣ ಹಕ್ಕು ...

ಬೆಂಗಳೂರು: ನಗರದ ಕೆಲ ಶಾಲೆಗಳಲ್ಲಿ 1ನೇ ತರಗತಿ ಮತ್ತು ನರ್ಸರಿಗೆ ದಾಖಲಾಗುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತಿವೆ ಎಂದು ಆರೋಪಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ( ಆರ್ ಟಿ ಇ) ಮಕ್ಕಳ ದಾಖಲಾತಿ ನಿಷೇಧಿಸಲು ಶಾಲೆಗಳು ಪ್ರವೇಶ ಪರೀಕ್ಷೆ ನಡೆಸುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ  ಪೋಷಕರಿಂದ ದೂರುಗಳು ಬಂದಿದ್ದು, ಈ ಸಂಬಂಧ  ಶಾಲೆಗಳಿಗೆ ನೊಟೀಸ್ ನೀಡಲಾಗಿದೆ. 
ಬೆಂಗಳೂರಿನ ಕೆಲವು ಶಾಲೆಗಳು 1ನೇ ತರಗತಿ ದಾಖಲಾತಿಗಾಗಿ  ಪ್ರವೇಶ ಪರೀಕ್ಷೆ ನಡೆಸಿವೆ ಎಂದು ಪೋಷಕರೊಬ್ಬರು ಬರೆದಿದ್ದಾರೆ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ, ಎಂದು ದೂರಿರುವ ಪೋಷಕರು 2 ಶಾಲೆಯ ಹೆಸರುಗಳನ್ನು ನಮೂದಿಸಿದ್ದಾರೆ. ನನ್ನ ಮಗನನ್ನು ಕರೆದುಕೊಂಡು ಶಾಲೆಗೆ ಹೋಗಿದ್ದೆ, ಆದರೆ ವೈಟ್ ಫೀಲ್ಡ್ ನ 2 ಶಾಲೆಗಳು ವಿದ್ಯಾರ್ಥಿ ಪ್ರವೇಶ ಪರೀಕ್ಷೆ ಬರೆದು ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದರು ಎಂದು ಪೋಷಕರೊಬ್ಬರು ಹೇಳಿದ್ದಾರೆ.
ನಗರದ ಹಲವು ಶಾಲೆಗಳಲ್ಲಿ ಸಂದರ್ಶನ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ, ಆದರೆ ಈ ಕ್ರಮಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದಾರೆ. 
ನಾವು ನೀಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲೇಬೇಕೆಂಬ ನಿಯಮವಿಲ್ಲ, ಮಕ್ಕಳ ಮೂಲ ಜ್ಞಾನದ ಮಟ್ಟ ತಿಳಿದುಕೊಳ್ಳಲು ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಯಾವುದೇ ಸಂದರ್ಶನ ಮಾಡುವುದಿಲ್ಲ, ಹಣ್ಣುಗಳು, ಬಣ್ಣಗಳು ಪ್ರಾಣಿಗಳ ಗುರುತು ಕೇಳುತ್ತೇವೆ ಎಂದು ದಕ್ಷಿಣ ಬೆಂಗಳೂರಿನ ಶಾಲೆಯೊಂದರ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!