ಸಾಂದರ್ಭಿಕ ಚಿತ್ರ 
ರಾಜ್ಯ

ಬಾರ್ ಮಾಲೀಕನ ಬಳಿ ಹಣ ಕೀಳಲು ಸುದ್ದಿ ವಾಹಿನಿ ವರದಿಗಾರನ ಯತ್ನ; ಕೇಸು ದಾಖಲು

ನ್ಯೂಸ್ ಚಾನೆಲ್ ನ ಸಿಇಒ ಬಿಲ್ಡರ್ ಹಣ ಪಡೆಯಲು ಯತ್ನಿಸುವಾಗ ಸಿಕ್ಕಿಬಿದ್ದ ಕೇವಲ ನಾಲ್ಕು ದಿನಗಳ...

ಬೆಂಗಳೂರು: ನ್ಯೂಸ್ ಚಾನೆಲ್ ನ ಸಿಇಒ ಬಿಲ್ಡರ್ ಒಬ್ಬರಿಂದ ಹಣ ಪಡೆಯಲು ಯತ್ನಿಸುವಾಗ ಸಿಕ್ಕಿಬಿದ್ದ ಕೇವಲ ನಾಲ್ಕು ದಿನಗಳ ನಂತರ ಅದೇ ಚಾನೆಲ್ ನ ಸುದ್ದಿಗಾರ ಮತ್ತು ಅವರ ನಾಲ್ವರು ಸಹಚರರು ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ವೊಂದರ ಮಾಲಿಕರಿಂದ 1 ಕೋಟಿ ರೂಪಾಯಿ ಹಣ ಲಂಚ ಸ್ವೀಕರಿಸಲು ಯತ್ನಿಸಿದ ಘಟನೆ ನಡೆದಿದೆ.

ಸುದ್ದಿಗಾರ ಪ್ರದೀಪ್ ಮತ್ತು ಅವರ ಕ್ಯಾಮರಾಮೆನ್ ಹಾಗೂ ಇನ್ನಿತರ ಮೂವರ ಜೊತೆ ಮೊನ್ನೆ 18ರಂದು ಕೋರಮಂಗಲದ ಬಾರ್ ವೊಂದಕ್ಕೆ ಹೋಗಿ ಮದ್ಯ ಸೇವಿಸಿದರು. ಬಾರ್ ಗರ್ಲ್ಸ್ ಮತ್ತು ಇತರ ಮಹಿಳಾ ಸಿಬ್ಬಂದಿಗಳ ವಿಡಿಯೋ ಮಾಡಲಾರಂಭಿಸಿದರು. ಸ್ವಲ್ಪ ಹೊತ್ತಿನ ನಂತರ, ಬಾರ್ ನಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ವಿಡಿಯೋವನ್ನು ಚಾನೆಲ್ ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆಯೊಡ್ಡಿದರು. ತಮ್ಮ ಗುರುತು ಚೀಟಿಯನ್ನು ತೋರಿಸಿ 1 ಕೋಟಿ ರೂಪಾಯಿ ಬೆದರಿಕೆಯೊಡ್ಡಿದರು.

ಬಾರ್ ನ ಸಿಬ್ಬಂದಿ ತಮ್ಮ ಮಾಲೀಕರಿಗೆ ವಿಷಯ ತಿಳಿಸಿದರು. ಆಗ ಮಾಲೀಕ ಮುನಿರಾಜು ಸ್ಥಳಕ್ಕೆ ಕೂಡಲೇ ಧಾವಿಸಿ ಬಂದು ಸುದ್ದಿಗಾರ ಮತ್ತು ಅವರ ಸಹಾಯಕರಿಗೆ ಹೊಡೆದರು. ಕೋರಮಂಗಲ ಪೊಲೀಸರಿಗೆ ದೂರು ನೀಡಲೆಂದು ಬಾರ್ ನ ಮಾಲೀಕರನ್ನು ಕರೆದುಕೊಂಡು ಪ್ರದೀಪ್ ಮತ್ತು ಅವರ ತಂಡ ಹೋದರು. ಆದರೆ ಮಾರ್ಗ ಮಧ್ಯದಲ್ಲಿಯೇ ತಪ್ಪಿಸಿಕೊಂಡು ಓಡಿಹೋದರು. ಮುನಿರಾಜು ಅವರು ಪ್ರದೀಪ್ ಮತ್ತು ಅವರ ಸ್ನೇಹಿತರ ವಿರುದ್ಧ ಕೇಸು ದಾಖಲಿಸಿದ್ದು ತಲೆಮರೆಸಿಕೊಂಡ ಚಾನೆಲ್ ಸಿಬ್ಬಂದಿ ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT