ಆಲದ ಮರವನ್ನು ಮರು ನೆಟ್ಟ ದೃಶ್ಯ 
ರಾಜ್ಯ

ಬೇರು ಸಹಿತ ಕಿತ್ತ ಆಲದ ಮರವನ್ನು ಮರು ನೆಟ್ಟ ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆ

50 ವರ್ಷಗಳ ಹಿಂದಿನ ಆಲದ ಮರ ಇತ್ತೀಚಿನ ಭಾರೀ ಮಳೆಗೆ ಉಡುಪಿಯ ಬನ್ನಂಜೆ ಬಳಿ ಬುಡ ಸಮೇತ...

ಉಡುಪಿ: 50 ವರ್ಷಗಳ ಹಿಂದಿನ ಆಲದ ಮರ ಇತ್ತೀಚಿನ ಭಾರೀ ಮಳೆಗೆ ಉಡುಪಿಯ ಬನ್ನಂಜೆ ಬಳಿ ಬುಡ ಸಮೇತ ಬಿದ್ದಿತ್ತು. ಅದನ್ನು ಮಣಿಪಾಲ ತಾಂತ್ರಿಕ ಸಂಸ್ಥೆಯ ಆವರಣದಲ್ಲಿ ಮತ್ತೆ ನೆಡಲಾಗಿದೆ. 
ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಅವರ ಯೋಜನೆಯಂತೆ ಬನ್ನಂಜೆಯಿಂದ 9 ಕಿಲೋ ಮೀಟರ್ ದೂರದಲ್ಲಿರುವ ಆಲದ ಮರದ ಬುಡವನ್ನು ಕ್ರೇನ್ ಸಹಾಯದಿಂದ ಎತ್ತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೆಡಲಾಗಿದೆ. ಉಡುಪಿ ಅರಣ್ಯಾಧಿಕಾರಿ ಕ್ಲಿಫೊರ್ಡ್ ಲೊಬೊ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಮರದ ಸಾಗಾಟಕ್ಕೆ ಅನುವು ಮಾಡಿಕೊಡಲು ಅದನ್ನು ಅಲ್ಲಲ್ಲಿ ಕತ್ತರಿಸಲಾಯಿತು.
ಮರದ ಬೇರನ್ನು ನೆಡಲು ಮೊದಲೇ ಗುಂಡಿ ತೋಡಿ ಇಡಲಾಗಿತ್ತು. ಮರವನ್ನು ಕ್ರೇನ್ ನಲ್ಲಿ ತಂದು ಕ್ಯಾಂಪಸ್ ಆವರಣದಲ್ಲಿ ನೆಡುವವರೆಗಿನ ದೃಶ್ಯ ನಿಜಕ್ಕೂ ಸೊಬಗಾಗಿತ್ತು. ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT