ಭದ್ರಾ ಜಲಾಶಯ 
ರಾಜ್ಯ

ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ಹಸಿರು ನಿಶಾನೆ

ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಕಾಲುವೆ....

ಬೆಂಗಳೂರು: ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿಸಿದೆ.
ಆದರೂ ಕೂಡ, ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಮತ್ತು ರಾಷ್ಟ್ರೀಯ ವನ್ಯಮೃಗ ಮಂಡಳಿಯ ಸದಸ್ಯ ಪ್ರೊ,ಆರ್. ಸುಕುಮಾರ್ ಅವರ ಸಲಹೆಯಂತೆ ಹಲವು ಉಪಶಮನ ಕ್ರಮಗಳನ್ನು ಭದ್ರಾ ಮೇಲ್ದಂಡೆ ಕಾಲುವೆ ಯೋಜನೆಗೆ ಶಿಫಾರಸು ಮಾಡಿದೆ.
ಸಾಂಪ್ರದಾಯಿಕ ಮುಕ್ತ ಕಾಲುವೆ ವ್ಯವಸ್ಥೆಯ ಜಾಗದಲ್ಲಿ ನೆಲದ್ವಾರದ ಪೈಪ್ ಲೈನ್ ವ್ಯವಸ್ಥೆಯನ್ನು ಬಳಸಲಾಗುತ್ತದೆ.ಯೋಜನೆಯ ಸ್ಥಳವು ಚಿರತೆ, ಆನೆ, ಹುಲಿ ಇತ್ಯಾದಿ ವನ್ಯಮೃಗಗಳ ವಾಸಸ್ಥಾನವಾಗಿದೆ. ಹೀಗಾಗಿ ಭೂಮಿಯೊಳಗೆ ಪೈಪ್ ಲೈನ್ ವ್ಯವಸ್ಥೆಯನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದು ರಾಷ್ಟ್ರೀಯ ವನ್ಯಮೃಗ ಮಂಡಳಿ ಹೇಳಿದೆ.
ಆದರೆ ಭದ್ರಾ ಮೇಲ್ದಂಡೆ ಯೋಜನೆಗೆ ಕೆಲವು ನಿರ್ಬಂಧ ಹೇರಲಾಗಿದೆ.  ಅವುಗಳೆಂದರೆ
-ಅರಣ್ಯ ಭೂಮಿಯ ಕಾನೂನು ಸ್ಥಿತಿ ಕಾಪಾಡಬೇಕು.
-ಮಣ್ಣಿನಲ್ಲಿ 1ರಿಂದ 2 ಮೀಟರ್ ಆಳದವರೆಗೆ ನೀರಾವರಿ ಪೈಪ್ ಲೈನ್ ಇರಬೇಕು.
-ಸ್ಥಳೀಯ ಸಸ್ಯವರ್ಗವನ್ನು ಕಾಪಾಡಬೇಕು.
-ವನ್ಯಜೀವಿ ಸಾವು ತಪ್ಪಿಸಲು ಹಳೆಯ ಕಾಲುವೆಯ ಮೇಲೆ ಇಳಿಜಾರು ವ್ಯವಸ್ಥೆ.
-ವನ್ಯಜೀವಿಗಳಿಗೆ ಸಾಧ್ಯವಾದಷ್ಟು ತೊಂದರೆ ಕೊಡಬಾರದು.
ಹಗಲು ಹೊತ್ತಿನಲ್ಲಿ ಸ್ಫೋಟಗಳನ್ನು ನಿಯಂತ್ರಿಸಬೇಕು.
-ರಾತ್ರಿ ವೇಳೆ ನಿರ್ಮಾಣ ಕೆಲಸ ಮಾಡಬಾರದು.
-ಅರಣ್ಯದೊಳಗೆ ರಾತ್ರಿ ಕಾರ್ಮಿಕರ ತಾಣವಿರಬಾರದು.
ಅರಣ್ಯ ಪ್ರದೇಶದ ಆಚೆ ಕಸ, ಅವಶೇಷಗಳನ್ನು ಎಸೆಯಬೇಕು.
-ಕಾರ್ಮಿಕ ವರ್ಗದ ನಿರ್ವಹಣೆ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT