ಸಂಗ್ರಹ ಚಿತ್ರ 
ರಾಜ್ಯ

ಆಟೋ ಚಾಲಕನ ಸಮಯಪ್ರಜ್ಞೆ: ಪೋಷಕರ ಮಡಿಲು ಸೇರಿದ ಕಿವಿ ಕೇಳದ, ಮಾತು ಬಾರದ 6 ವರ್ಷದ ಬಾಲಕ

ಬೆಂಗಳೂರಿನ ಲಿಂಗರಾಜಪುರಂ ನಿಂದ ಕಾಣೆಯಾಗಿದ್ದ ಕಿವಿ ಕೇಳದ ಹಾಗೂ ಮಾತು ಬಾರದ ಆರು ವರ್ಷದ ಬಾಲಕನನ್ನು ಪೊಲೀಸರು ಪತ್ತೆಹಚ್ಚುಲು ಆಟೋ...

ಬೆಂಗಳೂರು: ಬೆಂಗಳೂರಿನ ಲಿಂಗರಾಜಪುರಂ ನಿಂದ ಕಾಣೆಯಾಗಿದ್ದ ಕಿವಿ ಕೇಳದ ಹಾಗೂ ಮಾತು ಬಾರದ ಆರು ವರ್ಷದ ಬಾಲಕನನ್ನು ಪೊಲೀಸರು ಪತ್ತೆಹಚ್ಚುಲು ಆಟೋ ಚಾಲಕರೊಬ್ಬರು ಸಹಾಯ ಮಾಡಿದ್ದಾರೆ. 
ಕೊಪ್ಪಳ ಮೂಲದ ವರುಣ್ ಕಾಣೆಯಾಗಿದ್ದ ಬಾಲಕ. ಇತ ಲಿಂಗರಾಜಪುರಂನಲ್ಲಿ ತನ್ನ ಶಿಕ್ಷಕಿ ಸುಶೀಲಾ ಜೋಸೆಫ್ ಜತೆ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನ ಸುಶೀಲಾ ಅವರು ನಿದ್ರೆಗೆ ಜಾರಿದ್ದಾಗ ವರುಣ್ ಮನೆಯಿಂದ ಹೊರಬಂದಿದ್ದ. ನಿದ್ರೆಯಿಂದ ಎದ್ದು ಸುಶೀಲಾ ಅವರು ವರುಣ್ ನನ್ನು ಹುಡುಕಿದ್ದಾರೆ. ಆದರೆ ಆತನ ಎಲ್ಲೂ ಕಾಣದೆ ಇದ್ದಿದ್ದರಿಂದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಹೆಣ್ಣೂರು ಪೊಲೀಸರು ಇತರ ಪೊಲೀಸ್ ಠಾಣೆಗಳಿಗೆ ನಾಪತ್ತೆ ಕುರಿತು ಮಾಹಿತಿ ನೀಡಿದ್ದರು. 
ನೆಲಮಂಗಲದಲ್ಲಿ ಅಲೆದಾಡುತ್ತಿದ್ದ ಬಾಲಕನನ್ನು ಕಂಡ ಆಟೋ ಡ್ರೈವರ್ ಆತನನ್ನು ನೆಲಮಂಗಲದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದಾಗ ಹೆಣ್ಣೂರಿನಿಂದ ಬಾಲಕನೊಬ್ಬ ನಾಪತ್ತೆಯಾಗಿರುವುದು ತಿಳಿದ ಪೊಲೀಸರು ಠಾಣೆಗೆ ಕರೆ ಮಾಡಿದ್ದಾರೆ. ಕೂಡಲೇ ಹೆಣ್ಣೂರು ಪೊಲೀಸರು ಸುಶೀಲಾ ಅವರಿಗೆ ಕರೆ ಮಾಡಿ ಆತನನ್ನು ವಿವರಗಳನ್ನು ನೀಡಿದ್ದು ಅವರ ಮನೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ಚಾಲಕನ ಸಮಯಪ್ರಜ್ಞೆಯಿಂದ ಕಾಣಿಯಾಗಿದ್ದ ಬಾಲಕನೊಬ್ಬ ಪೋಷಕರ ಮಡಿಲು ಸೇರಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT