ರಾಜ್ಯ

ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ವೈಲ್ಡ್‌ಲೈಫ್‌ ಪ್ರಶಸ್ತಿ’

Raghavendra Adiga
ಬೆಂಗಳೂರು: ಪ್ರಖ್ಯಾತ ವನ್ಯಜೀವಿ ಸಂರಕ್ಷಕರಾದ ಎಸ್‌.ಜಯಚಂದ್ರನ್‌ ಸೇರಿ ನಾಲ್ವರಿಗೆ ಪ್ರತಿಷ್ಠಿತ ‘ಸ್ಯಾಂಕ್ಚುರಿ ಏಷ್ಯಾ ವೈಲ್ಡ್‌ಲೈಫ್‌ ಪ್ರಶಸ್ತಿ’ಗಳು ಲಭಿಸಿವೆ.
‘ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಇಂಡಿಯಾ (ಡಬ್ಲ್ಯುಸಿಎಸ್‌ಐ)’ ಸಂಘಟನೆಯ  ನಾಲ್ಕು ಮಂದಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಾಡಿನ ಎಸ್‌.ಜಯಚಂದ್ರನ್‌, ಮುಂಬೈನ ಶಶಾಂಕ್‌ ದಲ್ವಿ  ಅವರುಗಳು ‘ವನ್ಯಜೀವಿ ಸೇವಾ ಪ್ರಶಸ್ತಿ’ ಪಡೆದರೆ ನಿಕಿತ್‌ ಸುರ್ವೆ ಹಾಗೂ ವೈಶಾಲಿ ರಾವತ್‌ ‘ಯುವ ಪರಿಸರವಾದಿ’ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಸ್ಯಾಂಕ್ಚುರಿ ನೇಚರ್‌ ಫೌಂಡೇಷನ್‌ ನ 18ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈನಲ್ಲಿ ನಡೆದಿದ್ದು   ಆ ಸಂದರ್ಭ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
SCROLL FOR NEXT