ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 23,000 ಅನಧಿಕೃತ ಫ್ಲೆಕ್ಸ್ ಗಳು/ ಬ್ಯಾನರ್ ಗಳು ಇವೆ, ಅವುಗಳನ್ನು ತೆಗೆದುಹಾಕಬೇಕೆಂದು ಕೋರಿ ಸರಸ್ವತಿಪುರಂನ ನಿವಾಸಿಯೊಬ್ಬರು ಹೈ ಕೋರ್ಟ್ ಮೊರೆ ಹೋಗಿದ್ದಾರೆ.
ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆಗೆದುಹಾಕಲು ಸಂಬಂಧಪಟ್ಟ ಅಧಿಕಾರಿಗಳು (ಬಿಬಿಎಂಪಿ ಅಥವಾ ಪೊಲೀಸರು) ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಸಾಮಾಜಿಕ ಕಾರ್ಯಕರ್ತ ಮೈಗೇಗೌಡ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ. ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ. ವೀರಪ್ಪ ಅವರ ರಜಾ ಕಾಲದ ಪೀಠವು ನಗರಾಭಿವೃದ್ದಿ ಇಲಾಖೆ, ಬಿಬಿಎಂಪಿ ಕಮಿಷನರ್ ಮತ್ತು ಪೊಲೀಸ್ ಕಮಿಷನರ್ ಗಳಿಗೆ ಈ ಸಂಬಂಧ ನೋಟೀಸ್ ನೀಡಿದೆ.
ಹೂಡಿಕೆದಾರರಿಗೆ ಲಾಭವಾಗಲು ಜಾಹಿರಾತು ಮಾಫಿಯಾ ಕೆಲವೊಂದು ಗ್ಯಾಂಗ್ ಗಳಿಗೆ "ಸುಪಾರಿ" ನೀಡಿದ್ದು ಇದಕ್ಕಾಗಿ ಅವರು ಮರಗಳಿಗೆ ಕೊಡಲಿ ಏಟು ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಬಿಬಿಎಂಪಿಯ ಅರಣ್ಯ ಸಂರಕ್ಷಣಾಧಿಕಾರಿ ಮಾತ್ರ ಈ ಗ್ಯಾಂಗ್ ನವರು ಮರಗಳನ್ನು ಕಡಿಯುವುದನ್ನು ತಡೆಯಲು ನಮಗೆ ಸಾದ್ಯವಾಗುತ್ತಿಲ್ಲ ಎಂದಿದ್ದಾರೆ. ಒಂದು ವೇಳೆ ಅಧಿಕಾರಿಗಳು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಉ ಮುಂದಾದಾರೆ ಸಹ ಅವರು ಹಣ ತೆತ್ತು ತಮ್ಮ ದಂಧೆ ಮುಂದುವರಿಸುತ್ತಾರೆ.
ಕರ್ನಾಟಕ ಓಪನ್ ಪ್ಲೇಸಸ್ (ವಿಕಾರ ನಿವಾರಣೆ) ಕಾಯಿದೆ, 1981 ರ ಅಡಿಯಲ್ಲಿ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸದಿದ್ದರೆ, ಅನಧಿಕೃತ ಹೋರ್ಡಿಂಗ್ಸ್, ಫ್ಲೆಕ್ಸ್ ಪೋಸ್ಟರ್ ಗಳು, ಮತ್ತು ಬ್ಯಾನರ್ ಗಳು ಇತ್ಯಾದಿಗಳನ್ನು ಯಾರು ಮೇಲ್ವಿಚಾರಣೆ ಮಾಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಉಲ್ಲೇಖವಿರುವುದಿಲ್ಲ. ಹೀಗಾಗಿ ಕಾಯ್ದೆ ಅಡಿಯಲ್ಲಿ ನಿಯಮಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಕೋರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos