ರಾಜ್ಯ

ಬೆಂಗಳೂರು: ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು

Raghavendra Adiga
ಬೆಂಗಳೂರು: ತಾನು ಓದುತ್ತಿದ್ದ ಕಾಲೇಜಿನಲ್ಲೇ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ಬೆಂಗಳುರಿನ ಹೆಣ್ಣೂರು ಸಮೀಪ ವಿಬಿಆರ್ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.
ಎಚ್‌ಬಿಆರ್ ಲೇಔಟ್ 4ನೇ ಬ್ಲಾಕ್‌ನಲ್ಲಿರುವ ವಿಬಿಆರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ  ಭವ್ಯಸಿಂಗ್ (17) ಆತ್ಮಹತ್ಯೆ ಮಾಡಿಕೊಂಡ ಯುವತಿ.ೀಕೆಯ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕಾಲೇಜು ಆಡಳಿತ ಮಂಡಳಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದೆ.
ಆದರೆ ವಿದ್ಯಾರ್ಥಿನಿಯ ತಂದೆ ಜಗನ್ನಾಥ್ ಸಿಂಗ್ ಪ್ರಕಾರ ಇದು ಆತ್ಮಹತ್ಯೆಯಲ್ಲ. "ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ,ೀ ಘಟನೆಯ ಹಿಂದೆ ಯಾರದೋ ಕೈವಾಡವಿದೆ" ಎನ್ನುವ ಸಿಂಗ್ ಮಗಳ ಸಾವಿನ ಕುರಿತಂತೆ ಹೆಣ್ಣೂರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಪೋಲೀಸರು  ಅನುಮಾನಾಸ್ಪದ ಸಾವು (ಐಪಿಸಿ 174ಸಿ) ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮೂಲತಃ ಚಿಂತಾಮಣಿ ತಾಲೂಕಿನವಳಾದ ಭವ್ಯಸಿಂಗ್ ಜೂನ್ ತಿಂಗಳಿನಲ್ಲಿ ಪಿಯು ವ್ಯಾಸಂಗಕ್ಕಾಗಿ ಕಾಲೀಜಿಗೆ ದಾಖಲಾಗಿದ್ದಳು. ಕಾಲೇಜಿನ ಪಕ್ಕದಲ್ಲಿದ್ದ ಹಾಸ್ಟೆಲ್ ನಲ್ಲಿ ವಾಸವಿದ್ದಳೆನ್ನಲಾಗಿದೆ. ಶನಿವಾರ ಬೆಳಗ್ಗೆ ಹಾಸ್ಟೆಲ್ ವಿದ್ಯಾರ್ಥಿಗಳು ಉಪಹಾರಕ್ಕೆ ಹೊರಟಿದ್ದಾಗ ವರಾಂಡಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭವ್ಯ ಶವ ಕಾಣಿಸಿದ್ದು ಅವರು ಭಯಭೀತರಾಗಿ ಚೀರಿದ್ದಾರೆ. ಚೀರಾಟ ಕೇಳಿದ ಹಾಸ್ಟೆಲ್ ವಾರ್ಡನ್ ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದರು.
"ಶನಿವಾರ ಬೆಳಗಿನಿಂದಲೇ ಭವ್ಯ ಕಾಣಿಸಿರಲಿಲ್ಲ ಎಂದು ಆಕೆಯ ಹಾಸ್ಟೆಲ್ ಸಹಪಾಠಿಗಳು ಹೇಳಿದ್ದಾರೆ. ಶುಕ್ರವಾರ ರಾತ್ರಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಯಾವ ಕಾರಣಕ್ಕೆ ಆಕೆ ಈ ನಿರ್ಧಾರಕ್ಕೆ ಬಂಡಳೆನ್ನುವುದು ತಿಳಿದಿಲ್ಲ. ಮೃತದೇಹದ ಮರಣೋತ್ತರ ಪರಿಖ್ಷೆ ವರದಿ ಇನ್ನಷ್ಟೇ ಬರಬೇಕಿದ್ದು ಅದು ಕೈಸೇರಿದ ಬಳಿಕ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುತ್ತದೆ" ಎಂದು ಕಾಲೇಜು ಆಡಳಿತಾಧಿಕಾರಿಗಳು ಹೇಳಿದರು.
SCROLL FOR NEXT