ಸಾಂದರ್ಭಿಕ ಚಿತ್ರ 
ರಾಜ್ಯ

ಕಳ್ಳಬೇಟೆಗಾರರಿಗೆ ವರವಾಗಿರುವ ಹೊಸ ಅಸ್ತ್ರ ಯೂರಿಯಾ!

ಪ್ರಾಣಿಗಳನ್ನು ಕೊಲ್ಲಲು ಆಯುಧಗಳನ್ನು ಬಳಸುವುದು ಹಳೇಯದಾಗಿದೆ. ರೈತರು ಕೃಷಿಗಾಗಿ ಬಳಸುವ ಯೂರಿಯಾವನ್ನ ಬಳಸುವುದು ಕಳ್ಳ ಬೇಟೆಗಾರರ ಹೊಸ ..

ಬೆಂಗಳೂರು: ಪ್ರಾಣಿಗಳನ್ನು ಕೊಲ್ಲಲು ಆಯುಧಗಳನ್ನು ಬಳಸುವುದು ಹಳೇಯದಾಗಿದೆ.  ರೈತರು ಕೃಷಿಗಾಗಿ ಬಳಸುವ ಯೂರಿಯಾವನ್ನ ಬಳಸುವುದು ಕಳ್ಳ ಬೇಟೆಗಾರರ ಹೊಸ ಅಸ್ತ್ರವಾಗಿದೆ. ಪ್ರಾಣಿಗಳ ಹತ್ಯೆಗಾಗಿ ಹಂತಕರು ಯೂರಿಯಾ ಬಳಸುತ್ತಿರುವುದು ತಿಳಿದು ಬಂದಿದೆ.

ಚಿರತೆ ಮತ್ತು ಜಿಂಕೆಗಳನ್ನು ರಸಗೊಬ್ಬರ ಯೂರಿಯಾದಿಂದ ಕೊಲ್ಲುವ ಹೊಸ ಟೆಕ್ನಿಕ್ ಬಳಕೆ ಮಾಡಲಾಗುತ್ತಿದೆ. ಮಲೈ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ನಾಯಿಗಳ ಗುಂಪೊಂದು ಜಿಂಕೆ ತಲೆಯೊಂದನ್ನು ಎಳೆದು ತಂದಿದ್ದವು. ಈ ವೇಳೆ ಅದನ್ನು ಪರೀಕ್ಷೆ ನಡೆಸಿದಾಗ ಯೂರಿಯಾ ಬೆರೆಸಿದ ನೀರು ಕುಡಿದು ಜಿಂಕೆ ಸಾವನ್ನಪ್ಪಿರುವುದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳ ಪ್ರಕಾರ ಕೇವಲ ಜಿಂಕೆ ಮಾತ್ರವಲ್ಲ, ಯೂರಿಯಾ ಬೆರೆಸಿದ ವಿಷಪೂರಿತ ನೀರನ್ನು ಕುಡಿದು ಹಲವು ಕುರಿಗಳು ಕೂಡ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಕುದುರೆಮುಖ ನ್ಯಾಷನಲ್ ಪಾರ್ಕ್ ನಲ್ಲಿ ಲಕ್ಯ ಹೊಳ್ಳೆಯಲ್ಲಿದ್ದ ಮೀನುಗಳಿಗೆ  ಕಾಫರ್ ಸಲ್ಫೇಟ್ ಹಾಕಿ ಕೊಲ್ಲಲು ಯತ್ನಿಸಿದ್ದ ಮೂವರನ್ನು ಬಂಧಿಸಿದ್ದಾಗಿ ಮಲೈ ಮಹದೇಶ್ವರ ಬೆಟ್ಟ ವನ್ಯಜೀವಿ ಅರಣ್ಯಧಾಮ ಅರಣ್ಯಾಧಿಕಾರಿ ಸುಂದರ್ ತಿಳಿಸಿದ್ದಾರೆ.

ಪ್ರಾಣಿಗಳನ್ನು ಶೂಟ್ ಮಾಡಿ ಕೊಲ್ಲಲು ಕಷ್ಟವಾದ ಸಮಯದಲ್ಲಿ ಕಳ್ಳಬೇಟೆಗಾರರು ಈ ರೀತಿಯ ವಿಧಾನ ಬಳಸಿ ಕೊಲ್ಲುತ್ತಾರೆ, ಆದರೆ ಬಳಕೆಯ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟ ಎಂದು ವನ್ಯಜೀವಿ ಸಂರಕ್ಷಕ ಡಾ.ವಿ ಗಿರೀಶ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT