ಕೂಲಿಂಗ್ ಚಾರ್ಜ್ ಪಡೆದಿದ್ದ ವ್ಯಾಪಾರಿಗೆ 2.5 ಸಾವಿರ ರೂ ದಂಡದ ಬಿಸಿ! 
ರಾಜ್ಯ

ತಂಪು ಪಾನೀಯಕ್ಕೆ ಕೂಲಿಂಗ್ ಚಾರ್ಜ್ ಪಡೆದಿದ್ದ ವ್ಯಾಪಾರಿಗೆ 2.5 ಸಾವಿರ ರೂ ದಂಡದ ಬಿಸಿ!

ತಂಪು ಪಾನೀಯಕ್ಕೆ ನಿಗದಿತ ವೌಲ್ಯಕ್ಕಿಂತ (ಎಂಆರ್ ಪಿ) ಗಿಂತ ಹೆಚ್ಚು ಹಣ ಪಡೆದಿದ್ದ ಬೇಕರಿ ವ್ಯಾಪಾರಿಗೆ 2.5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಬೆಂಗಳೂರು: ತಂಪು ಪಾನೀಯಕ್ಕೆ ನಿಗದಿತ ವೌಲ್ಯಕ್ಕಿಂತ (ಎಂಆರ್ ಪಿ) ಗಿಂತ ಹೆಚ್ಚು ಹಣ ಪಡೆದಿದ್ದ ಬೇಕರಿ ವ್ಯಾಪಾರಿಗೆ 2.5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 
ಇಎಂಎಸ್ ವೆಬ್ ಟೆಕ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಎಂ ಕೇದಾರ್ ಎಂಬುವವರು ಮಂಜುಶ್ರೀ ಬೇಕರಿಯಲ್ಲಿ ತಂಪು ಪಾನೀಯ ಖರೀದಿಸಿದ್ದಾರೆ. ಬೇಕರಿ ವ್ಯಾಪಾರಿ ಕೂಲಿಂಗ್ ಚಾರ್ಜ್ ಹೆಸರಿನಲ್ಲಿ ತಂಪು ಪಾನೀಯಕ್ಕೆ ನಿಗದಿತ ಮೌಲ್ಯಕ್ಕಿಂತ 4 ರೂಪಾಯಿ ಹೆಚ್ಚಿಗೆ ಪಡೆದಿದ್ದಾರೆ. ಇದನ್ನು ಪ್ರಶ್ನಿಸಿ ಮಹೇಶ್ ಕೇದಾರ್ ಬಳಕೆದಾರರ ವಿವಾದಗಳ ಇತ್ಯರ್ಥ ವೇದಿಕೆ ಮೊರೆ ಹೋಗಿದ್ದಾರೆ. ಪ್ರಕರಣದ ಬಗ್ಗೆ ತೀರ್ಪು ನೀಡಿರುವ ಬಳಕೆದಾರರ ವಿವಾದಗಳ ಇತ್ಯರ್ಥ ವೇದಿಕೆ ಹೆಚ್ಚುವರಿ ಹಣ ಪಡೆದಿದ್ದ ವ್ಯಾಪಾರಿಗೆ 2000 ಸಾವಿರ ರೂ ದಂಡ ಹಾಗೂ 500 ಮೊಕದ್ದಮೆಯ ವೆಚ್ಚ ಸೇರಿ ಒಟ್ಟು 2.5 ಸಾವಿರ ರೂ ದಂಡ ವಿಧಿಸಿದೆ. 
ಸಯೀದ್ ಅನ್ಸರ್ ಖಲೀಮ್ ಹಾಗೂ ಭಾರತಿ ವಿಭುತೆ ಹಾಗೂ ಹೆಚ್ ಜನಾರ್ದನ್ ಅವರಿದ್ದ ಸಮಿತಿ ಈ ಆದೇಶ ನೀಡಿದ್ದು, ಗ್ರಾಹಕರು ನಿಗದಿತ ವೌಲ್ಯಕ್ಕಿಂತ (10 ರೂ) ಹೆಚ್ಚಿನ ಹಣ ಪಡೆದಿದ್ದಾರೆ ( ಒಟ್ಟು 14 ರೂ). ಆದರೆ ಕೇವಲ 12 ರೂಪಾಯಿಗೆ ಮಾತ್ರ ಬಿಲ್ ನೀಡಿದ್ದಾರೆ. ಇದನ್ನು ವಿರೋಧಿಸಿ ಮಹೇಶ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಕಾನೂನು ಸಮರದ ಭಾಗವಾಗಿ ತಾವು ಖರೀದಿಸಿದ್ದ ತಂಪು ಪಾನೀಯವನ್ನು ತಯಾರಿಸಿದ್ದ ಸಂಸ್ಥೆ ಪೆಪ್ಸಿಕೊ ಇಂಡಿಯಾ ಸಂಸ್ಥೆಗೆ ನೊಟೀಸ್ ಕಳಿಸಿದ್ದಾರೆ. ಗ್ರಾಹಕನ ನೊಟೀಸ್ ಗೆ ಪ್ರತಿಕ್ರಿಯೆ ನೀಡಿದ್ದ ಪೆಪ್ಸಿಕೊ ಇಂಡಿಯಾ ಸಂಸ್ಥೆ, ತಮ್ಮ ಉತ್ಪನ್ನಗಳಿಗೆ ಬೇಕರಿ ಮಾಲಿಕ 4 ರೂ ಹೆಚ್ಚಿನ ಹಣ ಪಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ನಿಗದಿತ ಮೌಲ್ಯವನ್ನು ಬಾಟಲ್ ಮೇಲೆಯೇ ಮುದ್ರಿಸಿರುವುದಾಗಿ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೆಪ್ಸಿ ಸಂಸ್ಥೆಯ ಮೇಲಿದ್ದ ಪ್ರಕರಣವನ್ನು ಕೈ ಬಿಡಲಾಗಿತ್ತು. ಆದರೆ ಕೂಲಿಂಗ್ ಹೆಸರಿನಲ್ಲಿ 4 ರೂ ಹೆಚ್ಚು ಪಡೆದಿದ್ದ ಬೇಕರಿ ಮಾಲಿಕನಿಗೆ 2.5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT