ಶಶಿಕಲಾ 
ರಾಜ್ಯ

ಶಶಿಕಲಾಗೆ ಜೈಲು ಶಿಕ್ಷೆ: ಕೇವಲ ಎರಡು ಗಂಟೆಗಳಲ್ಲೇ ಮುಗಿದ ಪ್ರಕ್ರಿಯೆ

ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ,ಕೆ ಶಶಿಕಲಾ, ಇಳವರಸಿ ಮತ್ತು ಸುಧಾಕರನ್

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ,ಕೆ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರಿಗೆ ಕಾರಾಗೃಹ ವಾಸದ ಪ್ರಕ್ರಿಯೆ ಕೇವಲ ಎರಡು ಗಂಟೆಗಳಲ್ಲಿ ಮುಗಿಯಿತು.

ಶಶಿಕಲಾ ಮತ್ತು ಇಳವರಸಿ ಸಂಜೆ 5.15ಕ್ಕೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೋರ್ಟ್ ಗೆ ಹಾಜರಾದರು. ಸಂಜೆ 6.18 ಕ್ಕೆ ಇಬ್ಬರನ್ನು ಜೈಲೊಳಗೆ ಕಳುಹಿಸಲಾಯಿತು. 7 ಗಂಟೆಗೆ ಸುಧಾಕರ್ ಜಡ್ಜ್ ಮುಂದೆ ಹಾಜರಾಗಿ ನಂತರ ಜೈಲು ಸೇರಿದರು.

ಕೋರ್ಟ್ ಆವರಣದೊಳಗೆ ಶಶಿಕಲಾ ಪತಿ ನಟರಾಜನ್ ಅವರನ್ನು ಮಾತ್ರ ಬಿಡಲಾಗಿತ್ತು. ಕೋರ್ಟ್ ರೂಂ ನಿಂದ ಜೇಲಿನ ಸೆಲ್ ನತ್ತ ಶಶಿಕಲಾ ನಡೆದರು. ಈ ವೇಳೆ  ಕೆಲವು ಮಹಿಳಾ ಪೊಲೀಸ್ ಪೇದೆಗಳು ಅವರನ್ನು  ಹಿಂಬಾಲಿಸಿದರು. ಸೆಲ್ ಒಳಗೆ ಹೋದ ಶಶಿಕಲಾ ಮಹಿಳಾ ಪೇದೆಗಳನ್ನು ನೋಡಿ ನಕ್ಕರು. ಶಶಿಕಲಾ ಬೆಂಬಲಿಗರು ಕೋರ್ಟ್ ಆವರಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು.

55 ನಿಮಿಷಗಳ ಕಾಲ ಸಮಯವನ್ನು ಕೋರ್ಟ್ ರೂಂ ನಲ್ಲಿ ಕಳೆದ ಶಶಿಕಲಾ ಮತ್ತು ಇಳವರಸಿ 100 ಮೀಟರ್ ದೂರವಿರುವ ಕಾರಾಗೃಹಕ್ಕೆ ಪೊಲೀಸ್ ಜೀಪ್  ನಲ್ಲಿ ತೆರಳಲು ಜೀಪ್ ಹತ್ತಿದರು, ಆದರೆ ಈ ವೇಳೆ ಸ್ಥಳದಲ್ಲಿಯೇ ಇದ್ದ ಕರ್ನಾಟಕ ಎಐಎಡಿಎಂಕೆ ಮುಖಂಡ ಪುಗಜೇಂದಿ ನಡೆದುಕೊಂಡು ಹೋಗುವಂತೆ ಸಾಹೇಬರು (ನ್ಯಾಯಾದೀಶರು) ಹೇಳಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಇಳವರಸಿಯ ಇಬ್ಬರು ಮಕ್ಕಳು ಕಾನೂನು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ತನ್ನ ತಾಯಿಗೆ ಕಾಗದ ಪತ್ರಗಳಿಗೆ ಸಹಿ ಮಾಡಲು ಸಹಾಯ ಮಾಡಿದರು. ನಂತರ ಇಬ್ಬರು ಅಳುತ್ತಾ ತನ್ನ ತಾಯಿ ಜೈಲಿನೊಳಗೆ ಹೋಗುವುದನ್ನು ನೋಡುತ್ತಾ ನಿಂತಿದ್ದರು.

ಶಶಿಕಲಾ ಮತ್ತು ಇಳವರಸಿ ಕಾರಾಗೃಹಕ್ಕೆ ತೆರಳಿದ 20 ನಿಮಿಷದ ನಂತರ ಸುಧಾಕರ್ ಕೋರ್ಟ್ ಗೆ ಹಾಜರಾದರು, ನಂತರ ಅವರನ್ನು ಜೈಲಿನ ಸೆಲ್ ಒಳಗೆ ಕಳುಹಿಸಲಾಯಿತು. ಈ ಎಲ್ಲಾ ಪ್ರಕ್ರಿಯೆಲು ಎರಡು ಗಂಟೆಗಳಲ್ಲಿ ಮುಗಿದವು.

ಆರೋಗ್ಯದ ಬಗ್ಗೆ ಜೈಲಿನಲ್ಲಿರುವ ವೈದ್ಯರು ಗಮನ ಹರಿಸುತ್ತಾರೆ, ಅಗತ್ಯವಿರುವ ಎಲ್ಲಾ ರೀತಿಯ ಔಷಧಿಗಳನ್ನು ಕೊಡುತ್ತಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT