ಮೈಸೂರು: ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನೂರಾರು ಎಕರೆ ಕಾಡ್ಗಿಚ್ಚಿಗೆ ಬಲಿಯಾಗಿದೆ. ಕಾಡು ಪ್ರಾಣಿಗಳನ್ನು ರಕ್ಷಿಸುವುದು ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ.
ನೀರಿನ ಗುಂಡಿಗಳು ಮುಚ್ಚಿದ್ದು, 6 ಸಾವಿರಕ್ಕೂ ಹೆಚ್ಚಿನ ಆನೆಗಳಿಗೆ ಈ ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುವುದು ಅರಣ್ಯ ಇಲಾಖೆಗೆ ಬಹುದೊಡ್ಡ ಸವಾಲಾಗಿದೆ.
ಕಾವೇರಿ ವನ್ಯಪ್ರಾಣಿ ಧಾಮ, ಬಿ ಆರ್ ಟಿ, ಎಂ ಎಂ ಹಿಲ್ಸ್. ಬಂಡೀಪುರ, ನಾಗರಹೊಳೆ, ಸತ್ಯಮಂಗಲ, ಮಸನಗುಡಿ, ತಮಿಳುನಾಡು ಮತ್ತು ಕೇರಳ ಭಾಗದ ವೈನಾಡು ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಜನಸಂಖ್ಯೆಗೆ ಅನುಗುಣವಾಗಿ ನಿರ್ವಹಣೆ ಮಾಡಲು ಉತ್ತಮ ಸಹಕಾರ ಅಗತ್ಯವಾಗಿದೆ.
ಹಲವು ಕಾಡುಗಳಿಗೆ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಬಿದ್ದಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ,. ಹೀಗಾಗಿ ಇಲಾಖೆ ಮತ್ತಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ಫೈರ್ ಲೈನ್ ಅಭ್ಯಾಸ ಗಂಭೀರವಾಗಿ ನಡೆಯುತ್ತಿಲ್ಲ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿಭಾಗದಲ್ಲಿ ಇರುವ ಕೆಳ ಹಂತದ ಸಿಬ್ಬಂದಿ ಅರಣ್ಯ ರಕ್ಷಣೆ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ.
ಸರ್ಕಾರ ಮತ್ತು ನಿಯಮ ರೂಪಕರು ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಕಾಡಿನ ಪೈರ್ ಲೈನ್ ಸಂಬಂಧಿತ ಸ್ಯಾಟ್ ಲೈಟ್ ಫೋಟೋ ತೆಗೆಯಬೇಕು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಒಮ್ಮೆ ಅರಣ್ಯಕ್ಕೆ ಬೆಂಕಿ ಬಿದ್ದು ನಾಶವಾದರೇ ಅದು ವಾಪಸ್ ಸಹಜ ಸ್ಥಿತಿಗೆ ಬರಲು ಸುಮಾರು 300ವರ್ಷಗಳ ಸಮಯ ಹಿಡಿಯುತ್ತದೆ. ಹಾಗಾಗಿ ಅಗತ್ಯ ವಿರುವ ಪ್ರಮಾಣದ ಸಿಬ್ಬಂದಿ ನೇಮಕ ಮಾಡುವುದು ಸೇರಿದಂತೆ ಆಗಾಗ ಸ್ಯಾಟ್ ಲೈಟ್ ಇಮೇಜ್ ತೆಗೆದು ಪರಿಶೀಲನೆ ನಡೆಬೇಕು ಎಂದು ನಿವೃತ್ತ ಅರಣ್ಯಾಧಿಕಾರಿ ಎಸಿ ಲಕ್ಷಣ್ ಅಭಿಪ್ರಾಯ ಪಟ್ಟಿದ್ದಾರೆ.
ಹೊಸದಾಗಿ ವರ್ಗಾವಣೆಯಾಗಿರುವ ಅರಣ್ಯ ಸಿಬ್ಬಂದಿ ತಾವಿರು ಕಾಡಿನ ಭೂಗೋಳ ಆರಣ್ಯದ ವಿನ್ಯಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಹಿರಿಯ ಅಧಿಕಾರಿಗಳಿಂದ ಹಾಗೂ ಸ್ಥಳೀಯ ಬುಡಕಟ್ಟು ಜನಾಂಗದವರಿಂದ ಬೆಂಕಿ ನಂದಿಸುವ ಬಗ್ಗೆ ಟಿಪ್ಸ್ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅರಣ್ಯ ಹಾಗೂ ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಜನತೆಗೆ ಜಾಗೃತಿ ಮೂಡಿಸಬೇಕು ಎಂದು ಬಿಆರ್ ಟಿ ವನ್ಯಧಾಮ ವಾರ್ಡನ್ ಮಲ್ಲೇಶ್ ತಿಳಿಸಿದ್ದಾರೆ.