ಪಿ.ರಾಜೀವ್ 
ರಾಜ್ಯ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವೆ: ಬೆಳಗಾವಿ ಶಾಸಕ ಪಿ. ರಾಜೀವ್ ವಿಡಿಯೋ ವೈರಲ್

ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದ ಕುಡಚಿ ಶಾಸಕ ಪಿ.ರಾಜೀವ ಈಗ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಮಾಯಕರಿಂದ ಹಣ ವಸೂಲಿಗೆ ...

ಬೆಳಗಾವಿ: ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದ ಕುಡಚಿ ಶಾಸಕ ಪಿ.ರಾಜೀವ ಈಗ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಅಮಾಯಕರಿಂದ ಹಣ ವಸೂಲಿಗೆ ಮುಂದಾದರೆ ಅಂತಹ ಪೊಲೀಸ್‌ ಠಾಣೆಗಳಿಗೆ ಬೆಂಕಿ ಹಚ್ಚುವೆ ಎಂದು ಹೇಳುವ ಮೂಲಕ ಹೊಸ ರಗಳೆಗೆ ನಾಂದಿ ಹಾಡಿದ್ದಾರೆ. 
ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ನಮ್ಮ ಬೆಂಬಲಿಗ ನಿಡಗುಂದಿ ಗ್ರಾಮದ ಬಸಪ್ಪ ಭಜಂತ್ರಿ ಅವರನ್ನು ಫಿಕ್ಸ್‌ ಮಾಡಲು  ರಾಯಭಾಗ ಪೊಲೀಸರು ಯತ್ನಿಸುತ್ತಿದ್ದಾರೆ. ಇದರಿಂದ ಹೆದರಿರುವ ಬಸಪ್ಪ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ತಪ್ಪು ಮಾಡಿಲ್ಲವೆಂದರೆ ಯಾಕೆ ಹೆದರುತ್ತಿ ಎಂದು ಕರೆಸಿಕೊಂಡಿದ್ದೇನೆ. ಕೇಸ್‌ನಿಂದ ಕೈಬಿಡಲು 1 ಲಕ್ಷ ರು ಕೊಡುವಂತೆ ಬಸಪ್ಪನಿಗೆ ರಾಯಬಾಗ ಇನ್‌ಸ್ಪೆಕ್ಟರ್ ಪೀಡಿಸಿದ್ದಾರೆ.  ಪೊಲೀಸ್‌ ಠಾಣೆಗಳು ಜನರನ್ನು ಪೀಡಿಸುವ ಕೇಂದ್ರಗಳಾಗುತ್ತಿವೆ. ಇದೇ ರೀತಿ ಮುಂದುವರಿದರೆ ಪೊಲೀಸ್ ಠಾಣೆಗೆ ಬೆಂಕಿ ಹಾಕುತ್ತೇನೆ’ ಎಂದು ಸಾರ್ವಜನಿಕವಾಗಿ ಆಕ್ರೋಶದಿಂದ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಆತ್ಮಹತ್ಯೆಗೆ ಕಾರಣ ಎಂದು ಹೇಳುತ್ತಿರುವ ವ್ಯಕ್ತಿ ಆಕೆ ನೇಣಿಗೆ ಶರಣಾದ ದಿನ ನಗರದಲ್ಲಿಯೇ ಇರಲಿಲ್ಲ, ಪೊಲೀಸರು ವಿನಾಕಾರಣ ಆತನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರಾಜೀವ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT