ಇಪಿಎಫ್ಒ ವಲಯ ಮುಖ್ಯಸ್ಥ ಶ್ರೀ ವಿ. ವಿಜಯ್ ಕುಮಾರ್ ಕಾಲ್ ಸೆಂಟರ್ ಉದ್ಘಾಟಿಸಿದರು. ಪ್ರಾದೇಶಿಕ ಪಿಎಫ್ ಆಯುಕ್ತ-1, ಶ್ರೀ. ಮನೀಶ್ ಅಗ್ನಿಹೋತ್ರಿ ಹಾಜರಿದ್ದರು. 
ರಾಜ್ಯ

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಘಾಟನೆ

ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ಕಾಲ್ ಸೆಂಟರ್ ಉದ್ಘಾಟಿಸಲಾಯಿತು.

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ಕಾಲ್ ಸೆಂಟರ್ ಉದ್ಘಾಟಿಸಲಾಯಿತು. ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಹಕರ ಪಿಎಫ್/ಪಿಂಚಣಿಗೆ ಸಂಬಂಧಪಟ್ಟ ಸಮಸ್ಯೆ, ದೂರು ಅಥವಾ ವಿಚಾರಣೆಗಳನ್ನು ದೂರವಾಣಿ ಮೂಲಕ ತಿಳಿಸುವುದು ಈ ಸೌಲಭ್ಯದ ಮುಖ್ಯ ಉದ್ದೇಶವಾಗಿದೆ.

ಗ್ರಾಹಕ ಸೇವಾ ದೂರವಾಣಿ ಸಂಖ್ಯೆ 18604251068. ಕೆಲಸದ ಸಮಯ: 9.30 AM ನಿಂದ 6.00 PM.

ಇಪಿಎಫ್ಒ ವಲಯ ಮುಖ್ಯಸ್ಥ ಶ್ರೀ ವಿ. ವಿಜಯ್ ಕುಮಾರ್, ಹೆಚ್ಚುವರಿ ಕೇಂದ್ರ ಪಿಎಫ್ ಆಯುಕ್ತ (ಕರ್ನಾಟಕ & ಗೋವಾ ರಾಜ್ಯಗಳು) ಅವರು ಕಾಲ್ ಸೆಂಟರ್ ಉದ್ಘಾಟಿಸಿದರು. ಪ್ರಾದೇಶಿಕ ಪಿಎಫ್ ಆಯುಕ್ತ-1, ಬೆಂಗಳೂರು, ಶ್ರೀ. ಮನೀಶ್ ಅಗ್ನಿಹೋತ್ರಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಇಪಿಎಫ್ ಚಂದಾದಾರರು ಮತ್ತು ಇಪಿಎಸ್ ಪಿಂಚಣಿದಾರರು, ಗ್ರಾಹಕ ಸೇವಾ ಫೋನ್ ನಂಬರ್ ಮೂಲಕ ತಮ್ಮ ಪಿಎಫ್/ಪಿಂಚಣಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಮಾಡಬಹುದು.

ಅಲ್ಲದೆ, ಇಪಿಎಸ್ ಪಿಂಚಣಿದಾರರು ಜೀವನ ಪ್ರಮಾಣ ಮೂಲಕ ತಮ್ಮ ಜೀವನ ಪ್ರಮಾಣಪತ್ರ ಸಲ್ಲಿಸಲು ಕಡೇಯ ದಿನಾಂಕವನ್ನು 28.02.2017 ರವರಗೆ ವಿಸ್ತರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT