ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕ: ಹಿಂದಿ ಭಾಷೆ ಜೊತೆಗೆ ಇಂಗ್ಲೀಷ್ ಗೂ ಕನ್ನಡಪರ ಸಂಘಟನೆಗಳಿಂದ ವಿರೋಧ

ಹಿಂದಿ ಭಾಷೆಯ ಬಳಿಕ ಇದೀಗ ಇಂಗ್ಲೀಷ್ ಭಾಷೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಂದ...

ಬೆಂಗಳೂರು: ಹಿಂದಿ ಭಾಷೆಯ ಬಳಿಕ ಇದೀಗ ಇಂಗ್ಲೀಷ್ ಭಾಷೆ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಯ ಕಾವು ಎದುರಿಸುತ್ತಿದೆ.
ಹಿಂದಿ ಭಾಷೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವಾಗಲೇ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಂಗಳೂರಿನ ಇಕೊ ಟೆಕ್ ಪಾರ್ಕ್ ಹತ್ತಿರದ ಮಾಲ್ ವೊಂದರ ರೆಸ್ಟೊರೆಂಟ್ ನ ಸಂಕೇತ ಹಲಗೆಗಳು(sign board) ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ವಿರೂಪಗೊಳಿಸಿದ್ದಾರೆ.
#NammaMetroHindiBeda(Our Metro, Wo don't want Hindi) ಎಂಬ ಹಿಂದಿ ವಿರೋಧಿ ಟ್ವಿಟ್ಟರ್ ಅಭಿಯಾನದ ನಂತರ ಚಿಕ್ಕಪೇಟೆ ಮತ್ತು ಮೆಜೆಸ್ಟಿಕ್ ನ ಎರಡು ಸಹಿ ಬೋರ್ಡ್ ಗಳಲ್ಲಿ ಇದ್ದ ಹಿಂದಿ ಭಾಷೆಗಳನ್ನು ಮುಚ್ಚಿ ಮೊನ್ನೆ 3ರಂದು ಚಿತ್ರೀಕರಿಸಲಾಗಿತ್ತು.
ಈ ಮೆಟ್ರೊ ಸ್ಟೇಷನ್ ಗಳಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಕೇತ ಬೋರ್ಡ್ ಗಳು ಇವೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ರೆಸ್ಟೊರೆಂಟ್ ಗಳ ವಿರುದ್ಧ ಹಿಂದಿ ವಿರೋಧಿ ಮತ್ತು ಇಂಗ್ಲಿಷ್ ವಿರೋಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಅವರು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಕೈಗಾರಿಕೆಗಳು, ವಾಣಿಜ್ಯ ಉದ್ಯಮಿಗಳು ಕರ್ನಾಟಕದ ಭೂಮಿಯನ್ನು, ವಿದ್ಯುತ್ ನ್ನು ಬಳಸುತ್ತಾರೆ. ಆದರೆ ಕನ್ನಡ ಭಾಷೆಯನ್ನು ಮತ್ತು ಕನ್ನಡಿಗರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಬಳಸಬೇಕೆಂದರೆ ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕನ್ನಡ ಬಳಸಲಿ ಎಂದು ಕೂಡ ಕನ್ನಡಪರ ಚಳುವಳಿಗಾರರು ಹೇಳುತ್ತಾರೆ.
ರಾಜ್ಯ ಸರ್ಕಾರ ಈ ಟ್ವಿಟ್ಟರ್ ಅಭಿಯಾನದ ಜೊತೆ ಇರುವುದರಿಂದ ಈ ಭಾಷಾ ಬಳಕೆ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿ ವಿರೋಧಿ ಚಳವಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಹಿಂದಿಯೇತರ ಬೇರೆ ರಾಜ್ಯಗಳಲ್ಲಿ ಏನು ನಿಯಮ ಅನುಸರಿಸುತ್ತಿದ್ದಾರೆಂದು ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿಯವರ ಆದೇಶದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ನೊಟೀಸ್ ಜಾರಿ ಮಾಡಿ ಅದು ಮೂರು ಭಾಷೆಯ ನೀತಿ ಏಕೆ ಅನುಸರಿಸುತ್ತಿದೆ ಎಂದು ವಿವರಿಸುವಂತೆ ಕೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT