ಸಮಾವೇಶಕ್ಕೆ ಬಂದಿದ್ದ ಉಪನ್ಯಾಸಕರು 
ರಾಜ್ಯ

ಬೆಂಗಳೂರು: ತನ್ವೀರ್ ಸೇಠ್ ಗಾಗಿ ಕಾದು ಕಾದು ಸಾಕಾಗಿ ಹಾಡು, ಡ್ಯಾನ್ಸ್ ಮೊರೆ ಹೋದ ಉಪನ್ಯಾಸಕರು

ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ರಾಜ್ಯ ಮಟ್ಟದ ಸಮಾವೇಶಕ್ಕಾಗಿ ...

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ರಾಜ್ಯ ಮಟ್ಟದ ಸಮಾವೇಶಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಗಾಗಿ ಸುಮಾರು 2 ಗಂಟೆಗಳ ಕಾಲ ಕಾಯಬೇಕಾಯಿತು.
1 ಗಂಟೆಗೆ ಕಾರ್ಯಕ್ರಮಕ್ಕೆ ಹಾಜರಾಗಬೇಕಿದ್ದ ಸಚಿವರು, ಉಪನ್ಯಾಸಕರ ಸಂಘದ ಪದಾಧಿಕಾರಿಗಳು  ಅವರ ನಿವಾಸಕ್ಕೆ ತೆರಳಿ ಮನವಿ ಮಾಡಿಕೊಂಡ ನಂತರ 3ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದರು. 
ಇದೇ ವೇಳೆ ಸಚಿವರಿಗಾಗಿ ಕಾದು ಕಾದು ಸುಸ್ತಾಗಿದ್ದ ಉಪನ್ಯಾಸಕರು ಸಮಯ ಕಳೆಯಲು ಡ್ಯಾನ್ಸ್ ಮತ್ತು ಹಾಡಿನ ಮೊರೆ ಹೋದರು.
ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ, ವೇದಿಕೆ ಮೇಲೆ ತೆರಳಿ ಏಕ ಪಾತ್ರಾಭಿನಯ ,ಹಾಡು ಹೇಳುವುದು ಹಾಗೂ ಡ್ಯಾನ್ಸ್ ಮಾಡಿದರು. ಕೆಲವರು ಜೋಕ್ಸ್ ಹೇಳಿದರು.  ವರ್ಷದಲ್ಲಿ ಒಂದು ಬಾರಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗುತ್ತದೆ. ಈ ವರ್ಷ ಸಚಿವರು ಬರಬೇಕೆಂಬದು ನಮ್ಮನಿರೀಕ್ಷೆಯಾಗಿತ್ತು ಎಂದು ಮಂಡ್ಯದಿಂದ ಬಂದಿದ್ದ ಉಪನ್ಯಕರೊಬ್ಬರರು ಹೇಳಿದ್ದಾರೆ,.
ಕಾರ್ಯಕ್ರಮಕ್ಕೆ ಬರುವುದಕ್ಕೆ ತಡವಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಸೇಠ್, ಹಲವು ಮಂದಿ ಬೆಳಗ್ಗೆಯಿಂದ ತಮ್ಮ ನಿವಾಸದಲ್ಲಿ ಕಾಯುತ್ತಿದ್ದರು, ಅವರುಗಳ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿದ್ದರು, ಹೀಗಾಗಿ ಬರಲು ತಡವಾಯಿತು ಎಂದು ಹೇಳಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT