ಸಾಂದರ್ಭಿಕ ಚಿತ್ರ 
ರಾಜ್ಯ

ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಮಧ್ಯರಾತ್ರಿ ನಡೆಯುವ ಬಾಲ್ಯವಿವಾಹಗಳು!

ಇದು ಕಾಲ್ಪನಿಕ ಮದುವೆ ಕಥೆಯಂತೆ ನಿಮಗೆ ಕೇಳಿಸಬಹುದು.ಆದರೂ ಇದು ನಡೆಯುತ್ತಿರುವುದು ಸತ್ಯ...

ಮೈಸೂರು: ಇದು ಕಾಲ್ಪನಿಕ ಮದುವೆ ಕಥೆಯಂತೆ ನಿಮಗೆ ಕೇಳಿಸಬಹುದು.ಆದರೂ ಇದು ನಡೆಯುತ್ತಿರುವುದು ಸತ್ಯ. ಚಾಮರಾಜ ನಗರ ಜಿಲ್ಲೆಯ ನದಿ ದಡದ ಹತ್ತಿರ ಮಧ್ಯರಾತ್ರಿಯಲ್ಲಿ ಸಣ್ಣ ದೇವಾಲಯದಲ್ಲಿ ಆ ಜೋಡಿಗಳು ಮದುವೆಯಾಗುತ್ತಾರೆ. ಆದರೆ ಅವೆಲ್ಲವೂ ಬಾಲ್ಯ ವಿವಾಹ ಅನ್ನುವುದು ಮಾತ್ರ ಖೇದನೀಯ ಸಂಗತಿ.
ಅಧಿಕಾರಿಗಳನ್ನು ವಂಚಿಸಿ ಪೋಷಕರು ಮತ್ತು ಎರಡು ಸಮುದಾಯದವರು ಕತ್ತಲೆಯಲ್ಲಿ ಇಂತಹ ಮದುವೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಹೀಗೆ 200ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ಸದ್ದಿಲ್ಲದೆ ನಡೆದಿವೆ. ತೀವ್ರ ರಹಸ್ಯದಿಂದ ಈ ಮದುವೆಗಳು ನಡೆಯುವುದರಿಂದ ಬಹಿರಂಗವಾಗುವುದಿಲ್ಲ ಎಂದು ಮಕ್ಕಳ ಮತ್ತು ಮಹಿಳೆಯರ ಮೇಲಿನ ಶಾಸಕಾಂಗ ಸಮಿತಿಯ ವರದಿ ಹೇಳುತ್ತದೆ ಎನ್ನುತ್ತಾರೆ ಚಾಮರಾಜನಗರ ಉಸ್ತುವಾರಿ ಜಿಲ್ಲಾಧಿಕಾರಿ ಡಿ.ಸಿ.ಹರೀಶ್ ಕುಮಾರ್.
ಚಾಮರಾಜನಗರ ಜಿಲ್ಲೆಯ ಎರಡು ಸಮುದಾಯಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ. 18 ವರ್ಷವಾದ ನಂತರ ತಮ್ಮ ಮಗಳಿಗೆ ಗಂಡು ಹುಡುಕುವುದು ಕಷ್ಟ ಎಂದು ಬಾಲ್ಯದಲ್ಲಿಯೇ ಪೋಷಕರು ಮದುವೆ ಮಾಡಿಸಿ ಬಿಡುತ್ತಾರೆ. ಈ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಹಲವು ಪ್ರಯತ್ನಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹರೀಶ್ ಕುಮಾರ್. 
ಸಾಮಾನ್ಯವಾಗಿ ಇಂತಹ ಬಾಲ್ಯ ವಿವಾಹಗಳು ಮಧ್ಯರಾತ್ರಿ ಹೊತ್ತು ಸಣ್ಣ ದೇವಾಲಯಗಳಲ್ಲಿ ನಡೆಯುತ್ತವೆ. ಬಾಲಕ, ಬಾಲಕಿಯ ಪೋಷಕರ ಸಮ್ಮುಖದಲ್ಲಿ ನಡೆಯುವ ಮದುವೆಯ ಕರೆಯೋಲೆ ಪತ್ರ ಮುದ್ರಿಸುವುದಿಲ್ಲ. ಒಂದು ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿ ಅವರು ಸ್ಥಳಕ್ಕೆ ಧಾವಿಸುವ ಹೊತ್ತಿಗೆ ಮದುವೆ ಮುಗಿದುಹೋಗಿರುತ್ತದೆ.
2016-17ನೇ ಸಾಲಿನಲ್ಲಿ ಮೈಸೂರಿನಲ್ಲಿ ಕೇವಲ ಒಂದು ಬಾಲ್ಯ ವಿವಾಹವಾದ ಬಗ್ಗೆ ಎಫ್ಐಆರ್ ದಾಖಲಾಗಿದೆಯಷ್ಟೆ. ಅದಕ್ಕಿಂತ ಹಿಂದಿನ ವರ್ಷ ಪ್ರಕರಣ ದಾಖಲಾಗಿಲ್ಲ. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೂಡ, ಚಾಮರಾಜನಗರಕ್ಕಿಂತ ಇಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಅಧಿಕಾರಿಗಳು ಜಾಗೃತಿ ಮೂಡಿಸಲು ಹೆಚ್ಚಿನ ಗಮನ ಹರಿಸಬೇಕೆಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT