ಅಪಾಯಕ್ಕೆ ಸಿಲುಕಿರುವ ಬಾರ್ಜ್ 
ರಾಜ್ಯ

ಮಂಗಳೂರಿನಲ್ಲಿ ಬಾರ್ಜ್ ದುರಂತ: ನೌಕೆಯಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿ ರಕ್ಷಣೆ!

ಮಂಗಳೂರಿನ ಉಲ್ಲಾಳದಲ್ಲಿ ಪ್ರತೀಕೂಲ ಹವಾಮಾನದಿಂದಾಗಿ ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಮಂಗಳೂರು: ಮಂಗಳೂರಿನ ಉಲ್ಲಾಳದಲ್ಲಿ ಪ್ರತೀಕೂಲ ಹವಾಮಾನದಿಂದಾಗಿ ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆಯಿಂದ ನಡೆದ ರಕ್ಷಣಾ ಕಾರ್ಯಾಚರಣೆ ರಾತ್ರಿ ಸ್ಥಗಿತವಾಗಿತ್ತಾದರೂ ಇಂದು ಮುಂಜಾನೆ ಪಣಂಬೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತೆ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾರ್ಜ್ ನಲ್ಲಿ ಎಲ್ಲ 27  ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಸಚಿವ ಯುಟಿ ಖಾದರ್ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು. ಅಲ್ಲದೆ ಬಾರ್ಜ್ ನಲ್ಲಿದ್ದ ಸಿಬ್ಬಂದಿಗಳು ದಡಕ್ಕೆ  ಆಗಮಿಸುತ್ತಿದ್ದಂತೆಯೇ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರಿನ ಉಲ್ಲಾಳದ ಮೊಗವೀರಪಟ್ಣ ಸಮೀಪ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್‌ ಪ್ರತೀಕೂಲ ಹವಾಮಾನ ಮತ್ತು ಭಾರಿ ಅಲೆಗಳ ಹೊಡೆತದಿಂದಾಗಿ ಶನಿವಾರ ಆಪಾಯಕ್ಕೆ  ಸಿಲುಕಿತ್ತು. ಶನಿವಾರ ಮಧ್ಯಾಹ್ನವೇ ಮಂಗಳೂರಿನ ಕರಾವಳಿ ರಕ್ಷಣಾ ಪಡೆಗೆ ಆಪಾಯದ ಮುನ್ಸೂಚನೆ ರವಾನಿಸಿತ್ತಾದರೂ ಪ್ರತೀಕೂಲ ಹವಾಮಾನದಿಂದಾಗಿ ಕರಾವಳಿ ರಕ್ಷಣಾ ಪಡೆಯ ನೌಕೆ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.  ಹೀಗಾಗಿ ರಕ್ಷಣಾ ಸಿಬ್ಬಂದಿ ಒಂದಷ್ಟು ಹೊತ್ತು ಕಾದರು.

ಆದರೆ ಸಂಜೆ ಹೊತ್ತಿಗೆ ಬಾರ್ಜ್ ಮುಳುಗುವ ಹಂತಕ್ಕೆ ತಲುಪುತ್ತಿದ್ದಂತೆಯೇ ಅದರಲ್ಲಿದ್ದ ಸಿಬ್ಬಂದಿ ಸ್ಫೋಟಕಗಳನ್ನು ಸಿಡಿಸಿ ತಾವು ತೀರಾ ಅಪಾಯದಲ್ಲಿದ್ದೇವೆ ಎಂಬ ಮಾಹಿತಿ ರವಾನಿಸಿದ್ದರು. ಎರಡು ಬಾರಿ ಸ್ಫೋಟಕ  ಸ್ಫೋಟಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳು ಡಿಂಗಿ (ಸಣ್ಣ ಗಾತ್ರದ ಫೈಬರ್‌ ಬೋಟ್‌)ಗಳನ್ನು ಬಾರ್ಜ್‌ ಬಳಿಗೆ ಕಳುಹಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಇದೀಗ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ  ಸಿಬ್ಬಂದಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT