ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾವನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ಸೊಸೆ

ಪತಿಯ ತಂದೆ ಮಾವನ ವಿರುದ್ಧ 28 ವರ್ಷದ ಮಹಿಳಾ ಎಂಜಿನಿಯರ್ ಒಬ್ಬರು ಬಸವನಗುಡಿ ಮಹಿಳಾ...

ಬೆಂಗಳೂರು: ಪತಿಯ ತಂದೆ ಮಾವನ ವಿರುದ್ಧ 28 ವರ್ಷದ ಮಹಿಳಾ ಎಂಜಿನಿಯರ್ ಒಬ್ಬರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. 
ರಾಧಿಕಾ (ಹೆಸರು ಬದಲಿಸಲಾಗಿದೆ) ಮೊನ್ನೆ ಸೋಮವಾರ  ಬಸವನಗುಡಿಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ, ''ವರ್ಷದ ಹಿಂದೆ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಘುನಂದನ್ ಎಂಬುವವರನ್ನು ವಿವಾಹವಾಗಿದ್ದೆ. ಮದುವೆಯಾದ ತಕ್ಷಣ ತಮ್ಮ ಪತಿ ಅಮೆರಿಕಾಕ್ಕೆ ವೃತ್ತಿ ಸಂಬಂಧ ಹೊರಟು ಹೋದರು. ನಾನು ಇಂದಿರಾ ನಗರದಲ್ಲಿ ಅತ್ತೆ-ಮಾವನ ಜೊತೆ ವಾಸವಾಗಿದ್ದೆ. ಕೆಲ ತಿಂಗಳು ಕಳೆದ ಮೇಲೆ ಮಾವ ವೆಂಕಟಾಪತಿ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಲಾರಂಭಿಸಿದರು. 
ಈ ಬಗ್ಗೆ ಪತಿ ರಘುನಂದನ್ ಗೆ ಹೇಳಿ ತನಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ, ತನ್ನನ್ನೂ ಅಮೆರಿಕಕ್ಕೆ ಕರೆದುಕೊಂಡು ಹೋಗುವಂತೆ ಕೋರಿದೆ. ಅದಕ್ಕೆ ವರದಕ್ಷಿಣೆ ತಂದರೆ ಮಾತ್ರ ಅಮೆರಿಕಕ್ಕೆ ಕರೆದೊಯ್ಯುವುದಾಗಿ ಹೇಳಿದರು. ತಾಯಿ ಮನೆಗೆ ಹೋಗಿ ಚಿನ್ನ ತೆಗೆದುಕೊಂಡು ಬಂದಾಗ ಅಮೆರಿಕಾಕ್ಕೆ ಕರೆದುಕೊಂಡು ಹೋದರು. ಸ್ವಲ್ಪ ಸಮಯದಲ್ಲಿ ಮಾವ ವೆಂಕಟಾಪತಿ ಮತ್ತು ಅವರ ಪತ್ನಿ ಕೂಡ ಅಮೆರಿಕಾಕ್ಕೆ ಹೋಗಿ ನೆಲೆಸಿದರು. 
ಅಲ್ಲಿ ಮತ್ತೆ ಮಾವ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಆಗ ಪತಿಗೆ ಹೇಳಿದಾಗ ತಮ್ಮ ತಂದೆ ಜೊತೆ ಸಹಕರಿಸುವಂತೆ ಹೇಳಿದರು. ಅವರ ದುರ್ವರ್ತನೆ ಗೊತ್ತಾದರೂ ಕೂಡ ಅತ್ತೆ ಮತ್ತು ತಮ್ಮ ಪತಿ ಮಾವನ ಬೆಂಬಲಕ್ಕೆ ನಿಂತರೇ ಹೊರತು ತನಗೆ ಆಸರೆಯಾಗಲಿಲ್ಲ. ಕಿರುಕುಳ ಇನ್ನಷ್ಟು ಹೆಚ್ಚಾಗತೊಡಗಿತು ಎಂದು ರಾಧಿಕಾ ದೂರಿನಲ್ಲಿ ವಿವರಿಸಿದ್ದಾರೆ.
ಇದರಿಂದ ನೊಂದು ಭಾರತಕ್ಕೆ ವಾಪಸಾದ ರಾಧಿಕಾ ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಕೇಸನ್ನು ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿಗಳನ್ನು ಸದ್ಯದಲ್ಲಿಯೇ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT