ರಾಜ್ಯ

ರಾಜ್ಯದ ಮೂರು ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು; ಅಪಾರ ಹಾನಿ

Manjula VN
ಹುಬ್ಬಳ್ಳಿ/ಕೊಡಗು: ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಈ ವರ್ಷ ಬಿದ್ದಿರುವ ಬೆಕಿ ಇತಿಹಾಸದಲ್ಲಿಯೇ 3ನೇ ಅತಿದೊಡ್ಡ ಹಾನಿಯನ್ನು ಉಂಟು ಮಾಡಿದೆ. ಇದರ ಬೆನ್ನಲ್ಲೇ. ಮತ್ತೆ ರಾಜ್ಯದ 3 ಜಿಲ್ಲೆಗಳ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ. 
ಬಂಡೀಪುರ ಅರಣ್ಯ ವ್ಯಾಪ್ತಿಯ ಬಿಳಿಗಿರಿರಂಗನ ಬೆಟ್ಟ, ಕೊಡಗಿನ ಅತ್ತೂರು-ಆನೆಕಾಡು ಪ್ರದೇಶ ಹಾಗೂ ಗದಗ ಜಿಲ್ಲೆಯ ಔಷಧೀಯ ಸಸ್ಯಗಳುಳ್ಳು ಅರಣ್ಯ ಕಪ್ಪತ್ತಗುಡ್ಡದಲ್ಲಿ ಭಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಔಷಧ ಸಸ್ಯಗಳು ಬೆಂಕಿಗಾಹುತಿಯಾಗಿವೆ. 
ಹಾರೋಗೇರಿ ಕೇಲೂರು ಗ್ರಾಮಗಳ ನಡುವಿನ ಗುಡ್ಡದ ಭಾಗದಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯ ರಭಸಕ್ಕೆ ಬೆಂಕಿ ಕೆನ್ನಾಲಿಗೆ ಇತರೆಡೆಗೂ ವ್ಯಾಪಿಸುತ್ತಿದೆ. ರಾಜ್ಯದಲ್ಲಿ ಮೂರು ವರ್ಷಗಳಿಂದ ಸತತ ಮನೆ ಕೊರತೆಯಿಂದಾಗಿ ಈಗಾಗಲೇ ಕಪ್ಪತ್ತಗುಡ್ಡದಲ್ಲಿ ಹಲವು ಸಸ್ಯ ಪ್ರಭೇದಗಳು ಒಣಗಿದ್ದು, ಇದರ ಮಧ್ಯೆಯೇ ಇದೀಗ ಕಾಡ್ಗಿಚ್ಚು ಕಾಣಿಸಿಕೊಂಡಿರುವ ಅಮೂಲ್ಯ ಗಿಡ ಮೂಲಿಕೆಗಳ ಖನಿಯನ್ನು ಬರಿದಾಗಿಸುವ ಆತಂಕಗಳು ಆರಂಭಗೊಂಡಿವೆ. 
ಇದರೊಂದಿಗೆ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲೂ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಹಲವು ದಿನಗಳ ಕಾಲ ಬೆಂಕಿಯಲ್ಲಿ ಬೆಂದಿದ್ದ ಬಂಡೀಪುರ ಅರಣ್ಯ ವ್ಯಾಪ್ತಿಯ ಬಿಳಿಗಿರಿರಂಗನಬೆಟ್ಟ ಹಾಗೂ ಕೊಡಗಿನ ಅತ್ತೂರು, ಆನೆಕಾಡು ಪ್ರದೇಶದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣ ಅರಣ್ಯ ಸಂಪತ್ತು ನಾಶವಾಗಿದೆ. 
ಕೊಡಗಿನ ಅತ್ತೂರು ಹಾಗೂ ಆನೆಕಾಡು ಅರಣ್ಯ ಪ್ರದೇಶ, ಕಲ್ಲೂರು ಬೆಟ್ಟಪ್ರದೇಶದಲ್ಲಿ ಸಂಭವಿಸಿದ ಬೆಂಕಿಗೆ 75ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಇದರಿಂದಾಗಿ ಕುಶಾಲನಗರ-ಮಡಿಕೇರಿ ರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. 
300 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಕಪ್ಪತ್ತಗುಡ್ಡದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಲು 200ಕ್ಕೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಕೆಲ ದುಷ್ಕರ್ಮಿಗಳು ಅರಣ್ಯಪ್ರದೇಶದಲ್ಲಿ ಬೆಂಕಿ ಹಾಕಿದ್ದಾರೆ. ಶುಕ್ರವಾರ ರಾತ್ರಿ ವೇಳೆ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
SCROLL FOR NEXT