ರಾಜ್ಯ

ದಾವಣಗೆರೆ: ಪಿಯು ಉತ್ತರ ಪತ್ರಿಕೆ ಸಹಿತ ವಿದ್ಯಾರ್ಥಿ ಪರಾರಿ

Vishwanath S
ದಾವಣಗೆರೆ: ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆ ಸಹಿತ ಕೊಠಡಿಯಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ನಡೆದಿದೆ. 
ಹರಪ್ಪನಹಳ್ಳಿ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿ ಸುಹೇಲ್ ಬಿ ಇಂದು ಇತಿಹಾಸ ಪರೀಕ್ಷೆ ಬರೆಯಲು ಬಂದಿದ್ದರು. ಕೊಠಡಿಯಲ್ಲಿ ಮೇಲ್ವಿಚಾರಕರು ಸುಹೇಲ್ ಗೆ ಉತ್ತರ ಪತ್ರಿಕೆ ಕೊಡುತ್ತಿದ್ದಂತೆ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. 
ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರು ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ವಿರುದ್ಧ ದೂರು ನೀಡಿದ್ದಾರೆ. 
SCROLL FOR NEXT