ಸ್ಪೀಕರ್ ಕೋಳಿವಾಡ್ 
ರಾಜ್ಯ

ಶಾಸಕರ ಹಾಜರಾತಿ ನಿಯಮಬದ್ಧಗೊಳಿಸಲು ಬಯೊಮೆಟ್ರಿಕ್‌ ವ್ಯವಸ್ಥೆಗೆ ಚಿಂತನೆ: ಸ್ಪೀಕರ್

ವಿಧಾನ ಸಭೆಗೆ ಶಾಸಕರ ಹಾಜರಾತಿ ನಿಯಮಬದ್ಧಗೊಳಿಸಲು ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಮಾಡಲು ಚಿಂತನೆ ನಡೆಸಲಾಗಿದೆ ಎಂದು ಸ್ಪೀಕರ್ ..

ಬೆಂಗಳೂರು: ವಿಧಾನ ಸಭೆಗೆ ಶಾಸಕರ ಹಾಜರಾತಿ ನಿಯಮಬದ್ಧಗೊಳಿಸಲು ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಮಾಡಲು ಚಿಂತನೆ ನಡೆಸಲಾಗಿದೆ ಎಂದು ಸ್ಪೀಕರ್ ಕೋಳಿವಾಡ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರ ಹಾಜರಾತಿ, ಕಲಾಪದಲ್ಲಿ ಪಾಲ್ಗೊಳ್ಳುವ ಮಾಹಿತಿ ಸಂಗ್ರಹಿಸುವ ತಂತ್ರಾಂಶ ಅಭಿವೃದ್ಧಿಪಡಿಸಲು ಯೋಚಿಸಲಾಗಿದೆ ಎಂದು ತಿಳಿಸಿದ್ದಾರೆ.ವಿಧಾನಸಭೆ ಕಲಾಪದಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳದ ಶಾಸಕರ ಮಾಹಿತಿಯನ್ನು ಆಯಾ ದಿನವೆ ಬಹಿರಂಗಪಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ,
ಕಲಾಪದಲ್ಲಿ ಶಾಸಕರು ಸಕ್ರಿಯವಾಗಿ ಭಾಗಿಯಾಗುವುದಿಲ್ಲ, ಜ್ವಲಂತ ಚರ್ಚೆಗಳು ನಡೆಯುವಾಗ ಸಭಾಂಗಣ ಖಾಲಿ ಇರುತ್ತದೆ, ಶಾಸಕರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ  ತಮ್ಮ ವಯಕ್ತಿಕ ಕೆಲಸ ಕಾರ್ಯಗಳ ಸಲುವಾಗಿ ಹೊರಹೋಗುತ್ತಾರೆ ಎಂಬ ಟೀಕೆ ಇದೆ. ಇದನ್ನು ತಪ್ಪಿಸಲು ಈ ಬಾರಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
ಹಾಜರಾತಿ ಕಡ್ಡಾಯಗೊಳಿಸಿದರು ಸದನದಲ್ಲಿ ಶಾಸಕರು ಇರುವುದಿಲ್ಲ. ತಡವಾಗಿ ಬಂದವರಿಗೆ ಸಹಿ ಹಾಕಲು ಅವಕಾಶ ಇರುವುದಿಲ್ಲ. ಆಯಾ ದಿನದ ಕಲಾಪ ಮುಗಿದ ಬಳಿಕ ಶಾಸಕರು ಎಷ್ಟು ಹೊತ್ತು ಸದನದಲ್ಲಿದ್ದರು, ಪ್ರಶ್ನೆ ಕೇಳಿ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆಯೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು  ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT