ಮರಿಗಾದಿ ಅವರ ಮನೆ ಪರಿಶೀಲಿಸಿ ಹೊರಬರುತ್ತಿರುವ ಅಧಿಕಾರಿಗಳು 
ರಾಜ್ಯ

ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಅಕ್ರಮ ಆಸ್ತಿ ಜೊತೆಗೆ ಅಧಿಕಾರಿಗೆ 3 ಪತ್ನಿಯರು

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಕೆ. ಮರಿಗಾದಿ ಅವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಗುರುವಾರ ಬೆಳಿಗ್ಗೆ ...

ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪ್ರಭಾರ ಉಪ ನೋಂದಣಾಧಿಕಾರಿ ಕೆ. ಮರಿಗಾದಿ ಅವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಿದೆ.

ಮರಿಗಾದಿ ಅವರ ಬಳಿ  ಆದಾಯಕ್ಕಿಂತ ಅಧಿಕ ಆಸ್ತಿಯಿರುವ ಜೊತೆಗೆ ಮೂರು ಪತ್ನಿರು ಇರುವುದು ಎಸಿಬಿ ದಾಳಿ ವೇಳೆ ಬೆಳಕಿಗೆ ಬಂದಿದೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಹೊಸಪೇಟೆಯ ಬಸವೇಶ್ವರ ನಗರ, ಕಡಲಬಾಳು ಗ್ರಾಮ ಮತ್ತು ಹರಿಗಬೊಮ್ಮನಹಳ್ಳಿ ಹಾಗೂ ಹಬವಿನಹಡಗಲಿಯ ಕಚೇರಿ ಮೇಲೆ ಅಧಿಕಾರಿಗಳು ಏಕಕಲಾದಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ  3.5 ಲಕ್ಷ ನಗದು ಮತ್ತು ಹೊಸಪೇಟೆಯಲ್ಲಿ ಮರಿಗಾದಿ ಮಗನ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ಇರುವುದೂ ಪತ್ತೆಯಾಗಿದೆ. ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ’ ಎಂದು ಎಸಿಬಿ ಎಸ್ ಪಿ ಅನಿತಾ ಹಡ್ಡೆಣ್ಣನವರ್ ತಿಳಿಸಿದ್ದಾರೆ.

ಹುಲಿಗೆಮ್ಮ ಹಾಗೂ ಸುಧಾ, ಮರಿಗಾದಿ ಅವರ ಮೊದಲ ಹಾಗೂ ಮೂರನೇ ಹೆಂಡತಿ ಎಂದು ದಾಳಿ ವೇಳೆ ಹೇಳಿಕೊಂಡಿದ್ದಾರೆ. ಆದರೆ, ವಿವಾಹ ನೋಂದಣಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನು ಹಾಜರುಪಡಿಸಿಲ್ಲ. ಇನ್ನೊಬ್ಬರು (ಎರಡನೇ) ಪತ್ನಿ ಯಲ್ಲಮ್ಮ ವಿಚ್ಛೇದನ ಕೋರಿ ಸಿರುಗುಪ್ಪ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ.ಸುಧಾ ಅವರ ಹೆಸರಿನಲ್ಲಿ ಎಂಟು ಕಡೆಗಳಲ್ಲಿ ನಿವೇಶನ, ಮನೆ ಇರುವುದು ಪತ್ತೆಯಾಗಿದೆ’ ಎಂದು ಕಲಬುರ್ಗಿ ಹಾಗೂ ಬಳ್ಳಾರಿ ಎ.ಸಿ.ಬಿ ಎಸ್ಪಿ ಅನಿತಾ ಹದ್ದೆಣ್ಣನವರ  ತಿಳಿಸಿದ್ದಾರೆ.

ಬಸವೇಶ್ವರ ಬಡಾವಣೆಯಲ್ಲಿ ಕೆ. ಮರಿಗಾದಿ ಅವರ ಮೊದಲ ಹೆಂಡತಿ ಹುಲಿಗೆಮ್ಮ, ಮೂರನೇ ಹೆಂಡತಿ ಸುಧಾ ಹಾಗೂ ಮರಿಗಾದಿ ಆಪ್ತ, ಡೀಡ್‌ ರೈಟರ್‌ ಅಲ್ತಾಫ್‌ ಮನೆ ಸೇರಿವೆ. ಮರಿಗಾದಿ ಆಪ್ತರಾದ ಕಡಲಬಾಳು ಗ್ರಾಮದ ಎ.ಎಂ.ಕೊಟ್ರೇಶ, ಕಡಲೆಕಾಳು ಕ್ಯಾಂಪಿನ ಸೂರ್ಯನಾರಾಯಣ ಅವರ ಮನೆಗಳಲ್ಲಿನ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Shikhar Dhawanಗೆ ಬಿಗ್ ರಿಲೀಫ್: 5.7 ಕೋಟಿ ರೂ ಹಣ ಹಿಂದಿರುಗಿಸಿ.. ಮಾಜಿ ಪತ್ನಿಆಯೇಷಾ ಮುಖರ್ಜಿಗೆ ಕೋರ್ಟ್ ಸೂಚನೆ!

ಆರೋಗ್ಯ ಇಲಾಖೆಯಲ್ಲಿ ಅಕ್ರಮ, ಔಷಧಿ ಕೊರತೆ: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ತರಾಟೆ

ಮಂಡ್ಯ: 1,844 ಅಕ್ರಮ ಇ-ಖಾತಾ ವಿತರಣೆ; ಮೂವರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳ ಅಮಾನತು

SCROLL FOR NEXT