ಸಾಂದರ್ಭಿಕ ಚಿತ್ರ 
ರಾಜ್ಯ

ಸಂಜೆ ವೇಳೆ ಸಂಚರಿಸಲಿದೆ ಬೆಂಗಳೂರು-ಮೈಸೂರು ನಡುವೆ ಹೊಸ ರೈಲು

ದಿನ ನಿತ್ಯ ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪ್ರತಿದಿನ ಬೆಂಗಳೂರು-ಮೈಸೂರು...

ಬೆಂಗಳೂರು: ದಿನ ನಿತ್ಯ ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪ್ರತಿದಿನ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ  ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಯಾಣಿಕರು ತುಂಬಿರುತ್ತಾರೆ.
ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗಿಸುವ ದೃಷ್ಟಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೇ ಶೀಘ್ರದಲ್ಲಿ ಎರಡು ನಗರಗಳ ನಡುವೆ ಹೊಸ ರೈಲನ್ನು ಪರಿಚಯಸಿಲಿದೆ, ಸರ್ಕಾರಿ ನೌಕರರು, ಗಾರ್ಮೆಂಟ್ಸ್ ಕಾರ್ಮಿಕರು ಮೈಸೂರಿನಿಂದ ಪ್ರತಿದಿನ ಸಂಜೆ 6.15 ಕ್ಕೆ ಪ್ರಯಾಣಿಸಬಹುದು.
ಹೊಸ ರೈಲು ಚಾಮುಂಡಿ ಎಕ್ಸ್ ಪ್ರೆಸ್ ಗೆ ಪೂರಕವಾಗಲಿದೆ. ಹೆಚ್ಚು ಕಡಿಮೆ ಎರಡು ರೈಲುಗಳ ಸಂಚಾರ ಸಮಯ ಒಂದೇ ಆಗಿರಲಿದೆ. ಈ ಯೋಜನೆಯನ್ನು ನಾವು ಬಹಳ ಹಿಂದೆಯೇ ನಿರ್ಧರಿಸಿದ್ದೆವು, ಆದರೆ ನಮ್ಮ ವಿಭಾಗದಲ್ಲಿ ರೇಕ್ಸ್ ಕೊರತೆಯಿಂದ ವಿಳಂಬವಾಯಿತು ಎಂದು ಹುಬ್ಬಳ್ಳಿ ಎಸ್ ಡಬ್ಲ್ಯೂಆರ್ ನ ಮುಖ್ಯ ಪಿಆರ್ ಓ ಇ ವಿಜಯ ಹೇಳಿದ್ದಾರೆ.
ಚಾಮುಂಡಿ ಎಕ್ಸ್ ಪ್ರೆ ಸ್ ಪ್ರತಿದಿನ ಸಂಜೆ 6.15 ಕ್ಕೆ ಕೆಎಸ್ ಆರ್ ನಿಲ್ದಾಣದಿಂದ ಹೊರಟು ರಾತ್ರಿ 9 ಗಂಟೆ 5 ನಿಮಿಷಕ್ಕೆ ಮೈಸೂರು ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಪರಿಚಯಿಸಲಿರುವ ಹೊಸ ರೈಲು ಸಂಜೆ 5.50ಕ್ಕೆ ಕೆಎಸ್ ಆರ್ ರೈಲು ನಿಲ್ದಾಣದಿಂದ ಹೊರಟು ರಾತ್ರಿ 8.50ಕ್ಕೆ ಮೈಸೂರು ತಲುಪುತ್ತದೆ.
ಎರಡು ನಗರಗಳ ನಡುವೆ ಸುಮಾರು 19 ರೈಲುಗಳು ಸಂಚರಿಸುತ್ತವೆ. ಅದರಲ್ಲಿ 7 ರೈಲುಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11.55 ರವರೆಗೆ ಸಂಚರಿಸುತ್ತವೆ. ಚಾಮುಂಡಿ ಎಕ್ಸ್ ಪ್ರೆಸ್ ರೈಲು ಸಂಚಾರ ವೇಳೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅನುಕೂಲಕವಾಗುವ ಸಮಯಕ್ಕೆ ಸಂಚರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT