ಬಿಸಿಯಾಗುತ್ತಿರುವ ಸ್ಟೇರ್ ಕೇಸ್ 
ರಾಜ್ಯ

ಇದ್ದಕ್ಕಿದ್ದಂತೆ ಬಿಸಿಯಾಗುತ್ತಿರುವ ಸ್ಟೇರ್ ಕೇಸ್: ಆತಂಕದಲ್ಲಿ ಮನೆ ಖಾಲಿ ಮಾಡಿದ ಮಾಲೀಕರು

ಹೊಸದಾಗಿ ಕಟ್ಟಿದ ಮನೆಯ ಸ್ಟೇರ್ ಕೇಸ್ ಇದ್ದಕ್ಕಿದ್ದಂತೆ ಬಿಸಿಯಾಗುತ್ತಿದ್ದು, ಮನೆ ಮಂದಿ ವಾಸಿಸಲು ಹೆದರಿ ಅಲ್ಲಿಂದ ...

ಬೆಳಗಾವಿ: ಹೊಸದಾಗಿ ಕಟ್ಟಿದ ಮನೆಯ ಸ್ಟೇರ್ ಕೇಸ್ ಇದ್ದಕ್ಕಿದ್ದಂತೆ ಬಿಸಿಯಾಗುತ್ತಿದ್ದು, ಮನೆ ಮಂದಿ ವಾಸಿಸಲು ಹೆದರಿ ಅಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಬೆಳಗಾವಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಹಂಗಾರ್ಗ ಎಂಬ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಮನೆ ಕಟ್ಟಲಾಗುತ್ತಿತ್ತು, ಕಟ್ಟಡ ಕೆಲಸ ಸಂಪೂರ್ಣವಾಗಿ ಇತ್ತೀಚೆಗಷ್ಟೆ ಕಾಂಬ್ಳೆ ಕುಟುಂಬದವರು ಹೊಸ ಮನೆಗೆ ಶಿಫ್ಟ್ ಆಗಿದ್ದರು. 
ಆದರೆ ಕಳೆದ ಕೆಲ ದಿನಗಳಿಂದ ಸ್ಟೇರ್ ಕೇಸ್ ನ ಮೊದಲ ಹಂತದಲ್ಲಿ ಬಿಸಿ ಗಾಳಿ ಬರುತ್ತಿರುವುದು ಕುಟುಂಬ ಸದಸ್ಯರ ಅನುಭವಕ್ಕೆ ಬಂದಿದೆ. ಹೀಗಾಗಿ ಹೆದರಿದ ಕಟುಂಬಸ್ಥರು ಮನೆಯ ಒಳಗೆ ಇರಲು ಹೆದರಿ ಮನೆಯ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದಾರೆ.
ಮನೆ ಮಾಲೀಕರಾದ ತುಕರಾಮ್ ಮತ್ತು ಭೀಮಪ್ಪ ಕಾಂಬ್ಳೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ತಮ್ಮ ಮನೆಯಲ್ಲಿ ಆಗುತ್ತಿರುವ ಘಟನೆ ಬಗ್ಗೆ ಹೇಳಿದ್ದಾರೆ. ಇದನ್ನು ತಿಳಿದ ಗ್ರಾಮದ ಹಲವು ಮಂದಿ ಬಿಸಿಗಾಳಿ ಬರುತ್ತಿರುನ ಸ್ಟೇರ್ ಕೇಸ್ ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ನಡೆಯುವ ದುರಂತವನ್ನು ಸೂಚಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದರ ಕೆಳಗೆ ಅಡಗಿಸಿಟ್ಟಿರುವ ನಿಧಿಯಿದೆ, ಅದರ ಸಂಕೇತವಾಗಿ ಸ್ಟೇರ್ ಕೇಸ್ ಬಿಸಿಯಾಗಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸ್ಟೇರ್ ಕೇಸ್ ಕೆಳಗೆ ಲಾವಾರಸ ತುಂಬಿದೆ ಹೀಗಾಗಿ ಅದು ಬಿಸಿಯಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಬಂದ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಟೇರ್ ಕೇಸ್ ಪಾಯವನ್ನು ಕೊರೆದು ಅಲ್ಲಿಂದ ಮಣ್ಣು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ. ಪರಿಶೀಲನೆ ನಂತರ ಬಿಸಿಗೆ ಕಾರಣ ಏನು ಎಂಬುದು ತಿಳಿದು ಬರಲಿದೆ.
ವಿದ್ಯುತ್ ಸೋರಿಕೆಯಿಂದಾಗಿ ಆ ಭಾಗ ಮಾತ್ರ ಬಿಸಿಯಾಗುತ್ತಿರಬಹುದು ಎಂದು ಸಿವಿಲ್ ಎಂಜಿನೀಯರ್ ಸುಬಾಷ್ ಹುಬಾಳ್ಕರ್ ಹೇಳಿದ್ದಾರೆ, ಕೆಲ ವರ್ಷಗಳ ಹಿಂದೆ ತಮ್ಮ ಸ್ವಂತ ಮನೆಯಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು ಎಂದು ಹೇಳಿದ್ದಾರೆ.  ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರೀಕ್ಷೆಗಾಗಿ ಮಣ್ಣು ತೆಗೆದು ಕೊಂಡು ಹೋಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ವಿಶಿಷ್ಠ ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ; ಈ ಬಗ್ಗೆ ಸ್ವತಃ ಸಿಎಂ ಹೇಳಿದ್ದೇನು?

ಬೀದರ್: ಅರಣ್ಯ ಭೂಮಿ ಒತ್ತುವರಿ ಆರೋಪಿಸಿದ್ದಕ್ಕೆ KDP ಸಭೆಯಲ್ಲೇ BJP ಶಾಸಕನ ಕಡೆ ನುಗ್ಗಿದ Congress MLC, Video Viral!

ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವ ಸೋಮಣ್ಣರತ್ತ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು!

ಒಮನ್‌ನಲ್ಲಿ ಟ್ರೆಕ್ಕಿಂಗ್ ದುರಂತ: ಮಲಯಾಳಂ ಹಿನ್ನೆಲೆ ಗಾಯಕಿ 'ಚಿತ್ರಾ ಅಯ್ಯರ್' ಸಹೋದರಿ ಸಾವು!

ನನಗಿರುವ ಮಾಹಿತಿ ಪ್ರಕಾರ ನಾಯಕತ್ವ ಬದಲಾವಣೆ ಇಲ್ಲ: ಸಚಿವ ಕೃಷ್ಣಬೈರೇಗೌಡ ಸ್ಫೋಟಕ ಹೇಳಿಕೆ

SCROLL FOR NEXT