ನಾರಾಯಣ ನಾಯ್ಕ್ 
ರಾಜ್ಯ

ಸ್ವಂತ ಖರ್ಚಿನಿಂದಲೇ ವಿದ್ಯಾರ್ಥಿ ವೇತನದ ಬಗ್ಗೆ ಜಾಗೃತಿ ಮೂಡಿಸಿ, ನೆರವಾಗುತ್ತಿರುವ 75 ವರ್ಷದ ಕೆ ನಾರಾಯಣ ನಾಯ್ಕ್

ನಿವೃತ್ತಿಯ ಜೀವನದಲ್ಲಿಯೂ ಮತ್ತೊಬ್ಬರಿಗೆ ಸಹಾಯ ಮಾಡುವ ಜನರು ವಿರಳ. ಆದರೆ ಇದಕ್ಕೆ ಅಪವಾದವೆಂಬಂತಿದ್ದಾರೆ 75 ವರ್ಷದ ಕೆ. ನಾರಾಯಣ ನಾಯ್ಕ್.

ಮಂಗಳೂರು: ನಿವೃತ್ತಿಯ ಜೀವನದಲ್ಲಿಯೂ ಮತ್ತೊಬ್ಬರಿಗೆ ಸಹಾಯ ಮಾಡುವ ಜನರು ವಿರಳ. ಆದರೆ ಇದಕ್ಕೆ ಅಪವಾದವೆಂಬಂತಿದ್ದಾರೆ 75 ವರ್ಷದ ಕೆ. ನಾರಾಯಣ ನಾಯ್ಕ್.
ಶಾಲಾ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಕೆ. ನಾರಾಯಣ ನಾಯ್ಕ್ ನಿವೃತ್ತರಾಗಿದ್ದು 2001 ರಲ್ಲಿ. ನಿವೃತ್ತರಾಗಿ 16 ವರ್ಷಗಳೇ ಕಳೆದಿದ್ದರು ಇಂದಿಗೂ ಸಹ ವಿದ್ಯಾರ್ಥಿಗಳಿಗೆ ನೆರವಾಗುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಈ ದಣಿವರಿಯದ ಶ್ರಮದಿಂದಲೇ ಇಂದು ಅದೆಷ್ಟೋ ನೂರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. 
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೆರವು ಬೇಕಿರುವ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ನೀಡುವ ಯೋಜನೆಗಳನ್ನು ಹೊಂದಿರುತ್ತವೆ. ಆದರೆ ಈ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪಷ್ಟ ಮಾಹಿತಿ ಇರುವುದಿಲ್ಲ. ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲು, ಜಾಗೃತಿ ಮೂಡಿಸಲು ಕೆ. ನಾರಾಯಣ ನಾಯ್ಕ್ ಸ್ವಂತ ಖರ್ಚಿನಿಂದಲೇ ಉಡುಪಿಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ. ಈ ಮೂಲಕ ಅರ್ಹ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯುವುದಕ್ಕೆ ಸಹಾಯ ಮಾಡುತ್ತಾರೆ. 
ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ನೆರವಾಗಲು ಹಲವಾರು ವಿದ್ಯಾರ್ಥಿ ವೇತನಗಳಿವೆ. ಆದರೆ ಈ ಬಗ್ಗೆ ಅರಿವಿನ ಕೊರತೆ ಇದೆ ಎನ್ನುತ್ತಾರೆ ಕೆ ನಾರಾಯಣ ನಾಯ್ಕ್. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಗ್ಗೆ ಮಾಹಿತಿ ನೀಡುವುದರಿಂದ ಕೆ ನಾರಾಯಣ ನಾಯ್ಕ್ ಅವರು ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. 
ನಮ್ಮ ಸ್ಜಾಲರ್ ಶಿಪ್ ಮಾಸ್ಟರ್ ಮಾಹಿತಿ ನೀಡುವುದರೊಂದಿಗೆ ಅರ್ಜಿ ತುಂಬುವುದಕ್ಕೂ ಸಹಾಯ ಮಾಡಲಿದ್ದು, ಕಾಲೇಜಿನಿಂದ ಓದು ಮುಕ್ತಾಯಗೊಳಿಸಿದವರಿಗೆ ಚೆಕ್ ತಲುಪಿಸುವುದಕ್ಕೂ ಸಹಾಯ ಮಾಡುತ್ತಾರೆ ಎನ್ನುತ್ತಾರೆ ಬಿಕಾಂ ವಿದ್ಯಾರ್ಥಿನಿ ನಿಶಾಂ. 2016 ರಲ್ಲಿ ನಾಯ್ಕ್ ಅವರು ಸುಮಾರು 130 ಸರ್ಕಾರಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದು, ಕಾರ್ಮಿಕರ ಮಕ್ಕಳ ಓದಿಗೂ ನೆರವಾಗಿದ್ದಾರೆ. 
ಸ್ಕಾಲರ್ ಶಿಪ್ ಬಗ್ಗೆ ಮಾಹಿತಿ ನೀಡುವುದಷೇ ಅಲ್ಲದೇ ಶಾಲೆಗಳಲ್ಲಿ ಕಾರ್ಪಸ್ ನಿಧಿ ಸ್ಥಾಪನೆಗೂ ನಾಯ್ಕ್ ನೆರವಾಗಿದ್ದು, ಬಂಟ್ವಾಳದ ಕೊಯಿಲಾ ಶಾಲೆಗೆ ಪ್ರಾರಂಭಿಕ 26,000 ರೂ ಮೊತ್ತದ ಕಾರ್ಪಸ್ ಫಂಡ್ ಪ್ರಾರಂಭಕ್ಕೂ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ನೆರವಿನಿಂದ ಬಲ್ಮಟ್ಟದಲ್ಲಿರುವ ಸರ್ಕಾರಿ ಕಾಲೇಜುಗಳಿಗೆ ವಾರ್ಷಿಕ 50-60 ಲಕ್ಷ ರೂ ವಿದ್ಯಾರ್ಥಿ ವೇತನದ ಸಹಾಯ ದೊರೆತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT