ಬಳ್ಳಾರಿ: ಬೆಟ್ಟ ಪ್ರದೇಶದಿಂದ ದೊಡ್ಡ ಬಂಡೆಯೊಂದು ಕುಸಿದು ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಬಾಲಕ ಮೃತಪಟ್ಟು ಇತರ ಮೂವರು ಗಾಯಗೊಂಡ ಘಟನೆ ಬಳ್ಳಾರಿಯ ನಾಗಲಕೆರೆ ಎಂಬಲ್ಲಿ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಭಾರೀ ಗುಡುಗು ಮಿಂಚು ಬಡಿದು ಬಂಡೆಕಲ್ಲು ಕುಸಿದು ಬಿದ್ದಿರಬಹುದು ಎಂದು ನಂಬಲಾಗಿದೆ.
ಮೃತ ಬಾಲಕನನ್ನು ಶಿವ ಎಂದು ಗುರುತಿಸಲಾಗಿದೆ. ಬಸಪ್ಪ, ಯಲ್ಲಮ್ಮ ಮತ್ತು ಯಶೋಧ ಎಂಬುವವರಿಗೆ ಗಾಯಗಳಾಗಿದ್ದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿದೆ.
ಬಳ್ಳಾರಿ ನಗರ ಪಾಲಿಕೆ ಮೇಯರ್ ಜಿ. ವೆಂಕಟರಮಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೌಲ್ ಬಜಾರ್ ಪೊಲೀಸರು ಕೇಸು ದಾಖಲಿಸಿದ್ದಾರೆ.