ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅರಳ ಮುಲ್ಲರಪಟ್ನದಲ್ಲಿನ ಫಲ್ಗುಣಿ ನದಿಯಲ್ಲಿ ಐವರು ಮದ್ರಸಾ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.
ಅಸ್ಲಂ, ಸವದ್, ಮುದಸ್ಸಿರ್, ರಮೀಜ್ ಮತ್ತು ಅಜ್ಮಲ್ ಗಳು ಮೃತ ದುರ್ದೈವಿಗಳಾಗಿದ್ದು ಎಲ್ಲರೂ 17ರಿಂದ 18 ವರ್ಷ ವಯಸ್ಸಿನವರಾಗಿದ್ದರು. ನೆರೆ-ಹೊರೆಯ ಮನೆಯವರಾದ ಇವರು ನಿನ್ನೆ ಸಂಜೆಯೇ ನಾಪತ್ತೆಯಾಗಿದ್ದರು. ಇದುವರೆಗೆ ನಡೆದ ಶೋಧ ಕಾರ್ಯಾಚರಣೆ ಯಲ್ಲಿ .ಅಸ್ಲಂ, ಸವದ್ ಮತ್ತು ರಮೀಜ್ ಅವರ ಮೃತದೇಹಗಳು ಪತ್ತೆಯಾಗಿವೆ.