ಸಂಗ್ರಹ ಚಿತ್ರ 
ರಾಜ್ಯ

ಖಾಸಗಿ ಬಸ್ ಗಳ ರಸ್ತೆಗಿಳಿಸಲಿದೆ ಬಿಎಂಟಿಸಿ!

ನಗರದಲ್ಲಿ ಮೊದಲು ಎಂಬಂತೆ ಬಿಎಂಟಿಸಿ ಸಂಸ್ಥೆ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

ಬೆಂಗಳೂರು: ನಗರದಲ್ಲಿ ಮೊದಲು ಎಂಬಂತೆ ಬಿಎಂಟಿಸಿ ಸಂಸ್ಥೆ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.
ಬಿಎಂಟಿಸಿಗೆ ಅಧಿಕವಾಗುತ್ತಿರುವ ನಿರ್ವಹಣಾ ವೆಚ್ಚ ಮತ್ತು ಬಸ್ ಗಳ ತಾಂತ್ರಿಕ ಸಮಸ್ಯೆ ನಿಯಂತ್ರಣದಲ್ಲಿನ ತೊಡಕಿನಿಂದಾಗಿ ಬಿಎಂಟಿಸಿ ಸಂಸ್ಥೆ ನಗರದಲ್ಲಿ ಸುಮಾರು 1500 ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ  ನಿರ್ಧರಿಸಿದೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಸುಮಾರು 77 ಕೋಟಿ ರು. ವೆಚ್ಚದಲ್ಲಿ ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದಿಗೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದ್ದು, ಅದರನ್ವಯ ಖಾಸಗಿ ಬಸ್ ಗಳು  ಇನ್ನು ಮುಂದೆ ನಗರದಲ್ಲಿ ಸಂಚರಿಸಲಿವೆ. ಆದರೆ ಈ ಬಸ್ ಗಳಿಗೆ ಚಾಲಕ ಮತ್ತು ನಿರ್ವಾಹಕರನ್ನು ಬಿಎಂಟಿಸಿ ಸಂಸ್ಥೆಯೇ ನೀಡಲಿದ್ದು, ಕೇವಲ ಬಸ್ ಗಳ ನಿರ್ವಹಣೆ ಮಾತ್ರ ಬಸ್ ಗಳ ಮಾಲೀಕತ್ವದ ಸಂಸ್ಥೆ ನಡೆಸಲಿದೆ.
ಮೂಲಗಳ ಪ್ರಕಾರ ಈ ಪಿಪಿಪಿ ಮಾದರಿಯಲ್ಲಿ ಸುಮಾರು 1500 ಬಸ್ ಗಳನ್ನು ರಸ್ತೆಗಿಳಿಸಲು ಕಳೆದ ಅಕ್ಟೋಬರ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಅನುಮೋದನೆ ದೊರೆತಿತ್ತು. ಇದೀಗ ಈ ಕಾರ್ಯಕ್ಕೆ ಬಿಎಂಟಿಸಿ ಚಾಲನೆ  ನೀಡಿದೆ. 
ಪ್ರಸ್ತುತ ಬಿಎಂಟಿಸಿ ಸಂಸ್ಥೆಯಲ್ಲಿ ಸುಮಾರು 6500 ಬಸ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 1500 ಬಸ್ ಗಳು ಕಾರ್ಯ ನಿರ್ವಹಿಸಲಾಗದ ಸ್ಥಿತಿಗೆ ಬಂದು ತಲುಪಿವೆ. ಹೀಗಾಗಿ ಈ ಬಸ್ ಗಳನ್ನು ಗುಜರಿಗೆ ಹಾಕಿ ಈ ಬಸ್ ಗಳ  ಬದಲಿಗೆ ಹೊಸ ಬಸ್ ಗಳನ್ನು ಖರೀದಿಸುವ ಬದಲು ಖಾಸಗಿ ಬಸ್ ಗಳನ್ನು ಲೀಸ್ ಗೆ ಪಡೆಯುವುದು ಈ ಪಿಪಿಪಿ ಮಾದರಿಯ ಯೋಜನೆಯಾಗಿದೆ. ಇದರಿಂದ ಬಿಎಂಟಿಸಿಗೆ ಬಸ್ ಗಳ ನಿರ್ವಹಣೆಯ ತಲೆನೋವಿರುವುದಿಲ್ಲ ಎಂದು  ಹೇಳಲಾಗುತ್ತಿದೆ.
ಇನ್ನು ಈ ಪಿಪಿಪಿ ಮಾದರಿ ಮಹಾರಾಷ್ಟ್ರದ ನಾಗರಪುರದಲ್ಲಿ ಈಗಾಗಲೇ ಚಾಲನೆಯಲ್ಲಿದ್ದು, ಯಶಸ್ವಿ ಕೂಡ ಆಗಿದೆ. ಆದೇ ಮಾದರಿಯನ್ನು ಇದೀಗ ಕರ್ನಾಟಕದಲ್ಲೂ ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಅವರು, ಪ್ರಸ್ತುತ ಸಂಸ್ಛೆಯಲ್ಲಿರುವ 6500 ಬಸ್ ಗಳ ಪೈಕಿ 1500 ಬಸ್ ಗಳು ನಿರ್ವಹಣೆ ಮಾಡಲಾಗದ ಸ್ಥಿತಿ ತಲುಪಿವೆ. ಇವುಗಳ ನಿರ್ವಹಣೆ  ತೀರಾ ದುಬಾರಿಯಾಗಿದೆ. ಹೀಗಾಗಿ ಈ ಬಸ್ ಗಳನ್ನು ಗುಜರಿಗೆ ಹಾಕಲು ಸಂಸ್ಥೆ ನಿರ್ಧರಿಸಿದ್ದು, ಈ ಬಸ್ ಗಳ ಬದಲಿಗೆ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ಚಿಂತನೆಯಲ್ಲಿ ತೊಡಗಿದ್ದೇವೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಲಾಗುತ್ತಿದೆ. ಪಿಪಿಪಿ ಮಾದರಿಯಿಂದ ಸಂಸ್ಥೆಗೂ ಲಾಭವಾಗಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT