ರಾಜ್ಯ

ಹೆಬ್ಬಾವಿನ ಜೊತೆ ಹೋರಾಡಿ, ಶೌರ್ಯ ಪ್ರಶಸ್ತಿ ಗಿಟ್ಟಿಸಿಕೊಂಡ ಬಾಲಕ

Sumana Upadhyaya
ಮಂಗಳೂರು: ಭಯಂಕರ ವಿಷಯಕಾರಿ ಹಾವುಗಳನ್ನು ನಿಭಾಯಿಸುವುದು ಮಕ್ಕಳಾಟವಲ್ಲ. ಆದರೆ 12 ವರ್ಷದ ವೈಶಾಕ್ ಗೆ ಇದು ದೊಡ್ಡ ವಿಷಯವೇ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡೂರು ಗ್ರಾಮದ ವೈಶಾಕ್ ತನ್ನನ್ನು ನುಂಗಲು ಬಂದ ಹೆಬ್ಬಾವು ವಿರುದ್ಧ ಹೋರಾಡಿದ್ದು ಮಾತ್ರವಲ್ಲದೆ ತನ್ನ ಹಿರಿಯ ಸೋದರ ಸಂಬಂಧಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ವೈಶಾಕ್ ಗೆ ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. 
ಇವನ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೌಕ್ರಾಡಿ ಗ್ರಾಮದ ನಿತಿನ್ ಕೆ.ಆರ್ ಕೂಡ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈತ ಹಾವು ಕಚ್ಚಿದ ತನ್ನ ಸೋದರಿಯನ್ನು ಮತ್ತು ಇತರ ಐವರನ್ನು ಕಾಪಾಡಿದ್ದಾನೆ.
SCROLL FOR NEXT