ಮಂಗಳೂರು-ಬೆಂಗಳುರು ರೈಲು 
ರಾಜ್ಯ

ಮಂಗಳೂರು-ಬೆಂಗಳೂರು ರೈಲು: ಫೆ.10ರಿಂದ ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚಾರ

ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ.

ಬೆಂಗಳೂರು: ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ. ವಾರದಲ್ಲಿ 4 ದಿನ ಯಶವಂತಪುರ–ಶ್ರವಣಬೆಳಗೊಳ ಮಾರ್ಗ ಹಾಗೂ 3 ದಿನ ಮೈಸೂರು ಮಾರ್ಗದಲ್ಲಿ ರೈಲು ಸಂಚಾರ ನಡೆಸಲಿದೆ. ಮುಂದಿನ ವರ್ಷದ ಫೆ.10ರಿಂದ ಈ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ.
ಇದಾಗಳೇ ಸಿದ್ದಗೊಂಡಿರುವ ಯಶವಂತಪುರ–ಶ್ರವಣಬೆಳಗೊಳ ಮಾರ್ಗದಿಂದಾಗಿ ರಾಜಧಾನಿಯಿಂದ ಮಂಗಳೂರಿಗೆ ತಲುಪುವ ಒಟ್ಟು ಸಂಚಾರ ಅವಧಿ 3 ಗಂಟೆಗಳಷ್ಟು ತಗ್ಗಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ನಿಲ್ದಾಣದಲ್ಲಿ ನಿಂತು ಮಂಗಳೂರು ತಲುಪಲಿದ್ದು, ಅಲ್ಲಿಂದ ಮುಂದೆ ಕಾರವಾರ ಹಾಗೂ ಕಣ್ಣುರಿನತ್ತ ಸಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು-ಮಂಗಳೂರು ರೈಲಿನ ನೂತನ ವೇಳಾಪಟ್ಟಿ ಹೀಗಿದೆ- ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.15ಕ್ಕೆ ಹೊರಟು ಮರುದಿನ ಬೆಳಗ್ಗೆ 6.20ಕ್ಕೆ ಮಂಗಳೂರು ಸೇರಲಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dasara Holidays extended: ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ; ಜಾತಿ ಗಣತಿ ಅವಧಿ ವಿಸ್ತರಣೆ!

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್, Youtube ವಿಡಿಯೋ ಡಿಲೀಟ್!

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

ಡಿಕೆಶಿಯ 'ಸುರಂಗದ ಹುಚ್ಚಿ'ನಿಂದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ- ಆರ್. ಅಶೋಕ್

SCROLL FOR NEXT