ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 
ರಾಜ್ಯ

ಬೆಂಗಳೂರು ಅಭಿವೃದ್ಧಿಗೆ ಬಿಡಿಎ ಮಾಸ್ಟರ್ ಪ್ಲಾನ್, ಎರಡು ಹೊಸ ರಿಂಗ್ ರಸ್ತೆಗಳು, ಮೆಟ್ರೋ ಮಾರ್ಗಗಳ ಜೋಡಣೆಗೆ ತಯಾರಿ

ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ.

ಬೆಂಗಳುರು: ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ. ತಾತ್ಕಾಲಿಕ ಪರಿಷ್ಕೃತ ಮಾಸ್ಟರ್ ಪ್ಲಾನ್ 2031 (ಆರ್ ಎಂಪಿ) ಅನು ಬಿಡಿಎ ನಿನ್ನೆ ಸಾರ್ವಜನಿಕರಿಗೆ ಬಿಡುಗಡೆಗೊಳಿಸಿದೆ. 
ಉದ್ದೇಶಿತ ಯೋಜನೆಯು ರಿಂಗ್ ರಸ್ತೆಗಳ ಬಳಿ ಮೆಟ್ರೋ ಮಾರ್ಗಗಳ ನಿರ್ಮಾಣ, ಸಿಲ್ಕ್ ಬೋರ್ಡ್-ಕೆ ಆರ್ ಪುರಂ (ಮೆಟ್ರೋ ಫೇಸ್ 2A) ಬಳಿ ಹೊಸ ರಿಂಗ್ ರಸ್ತೆ ನಿರ್ಮಾಣವನ್ನು ಹೊಂದಿದೆ.  "ಸಂಚಾರ ದಟ್ಟಣೆಗೆ ತಗ್ಗಿಸಲು ನಾವು ಸಂಪೂರ್ಣ ಯೋಜನೆಯನ್ನು ಮೆಟ್ರೋದೊಡನೆ ಸಂಪರ್ಕಿಸಲು ಉದ್ದೇಶಿಸುತ್ತೇವೆ. ನಾವು ಪ್ರಸ್ತಾಪಿಸಿದ ಇನ್ನೊಂದು ಪ್ರಮುಖ ಮೆಟ್ರೊ ಸಂಪರ್ಕವಾದ ಮೆಟ್ರೋ ಹಂತ 2A  ಕೆ ಆರ್ ಪುರಂನಿಂದ ಹೆಬ್ಬಾಳ-ಮಾಗಾಡಿ ರಸ್ತೆ-ಮೈಸೂರು ರಸ್ತೆಯ ಮಾರ್ಗ ವಿಸ್ತರಣೆಯಿಂದ ಸಂಪೂರ್ಣ ಹೊರ ವರ್ತುಲ ರಸ್ತೆಯನ್ನು ಮುಚ್ಚಬಹುದು. ಈ ಪ್ರಸ್ತಾವಿತ ಮಾರ್ಗದ ಬಗ್ಗೆ ಬಿಎಂಆರ್ ಸಿ ಎಲ್ ಉತ್ಸುಕರಾಗಿದ್ದು, ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದೆ"  ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಉದ್ದೇಶಿಸಿರುವ ಬಿಡಿಎ ಈಗಿರುವ ಸುಮಾರು 6,000 ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು 15,000 ಗಳಿಗೆ ಏರಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಜನರನ್ನು ಹೆಚ್ಚು ಅವಲಂಬಿತರಾಗುವ?ಂತೆ ಮಾಡುವ ಪ್ರಸ್ತಾಪ ಇತ್ಟಿದೆ. ಈ ಪ್ರಕಾರ ಪ್ರಸ್ತುತ ಶೇ.48 ರಷ್ಟು ಸಾರ್ವಜನಿಕರಿಂದ ಶೇ. 68-70ರಷ್ಟು ಜನರನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸಲು ಬಿಡಿಎ ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT